ಉದ್ಯಮಿ ಸಭಾಶ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು. ಕೆಜೆಎ ಮಾಜಿ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾವೀರ ಪಡನಾಡ, ಡಾ. ನೇಮಿನಾಥ ಮದ್ದಂ ಮತ್ತು ಬಿ. ಪ್ರಸನ್ನಯ್ಯ ಅವರಿಗೆ ‘ದಾನ ಚಿಂತಾಮಣಿ’ ಪ್ರಶಸ್ರಿ ನೀಡಿ ಸನ್ಮಾನಿಸಲಾಯಿತು. ಉತ್ತರ ಕರ್ನಾಟಕ ಜೈನ ಬಾಂಧವರು ಸಂಘಟನೆಯ ಉಪಾಧ್ಯಕ್ಷ ಶಾಂತಿನಾಥ ಹುದ್ದಾರ, ಕಾರ್ಯಾಧ್ಯಕ್ಷ ಅಜಿತ ಮುರುಗುಂಡೆ, ಕಾರ್ಯದರ್ಶಿ ಬಾಹುಬಲಿ ಗೌರಾಜ ಭಾಗವಹಿಸಿದ್ದರು.