‘ತಜ್ಞರ ಪ್ರಕಾರ ಲಸಿಕೆ ಪಡೆದವರಲ್ಲಿ ಸೋಂಕು ನಿರೋಧಕ ಶಕ್ತಿ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ವಿದೇಶಗಳಿಗೆ ಲಸಿಕೆ ರಫ್ತು ಮಾಡಲು ಅವಕಾಶ ನೀಡಿ ಖಾಸಗಿಯವರಿಗೆ ಹಣ ದೋಚಲು ಅನುವು ಮಾಡಿಕೊಟ್ಟಿದೆ. ಕಾರ್ಪೊರೇಟ್ ದಣಿಗಳ ಕೈಗೆ ದೇಶವನ್ನು ಒಪ್ಪಿಸಿ ಜನರನ್ನು ಬೀದಿಬೀದಿಯಲ್ಲಿ ನರಳಿ ಸಾಯುವಂತೆ ಪ್ರಧಾನಿ ಮಾಡಿದ್ದಾರೆ. ಕೂಲಿ ಕಾರ್ಮಿಕ ವರ್ಗ ₹ 1,200 ನೀಡಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವೇ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.