ಯಲಹಂಕದ ಸುಭೇದಾರ್ ಪಾಳ್ಯದ ರವಿಶಂಕರ್ (28), ರಾಮಗೊಂಡನಹಳ್ಳಿಯ ಶರತ್ ಬಾಬು (24), ಯಲಚೇನಹಳ್ಳಿಯ ದೀಪಕ್ ಕುಮಾರ್ (20), ಅಟ್ಟೂರ್ ಲೇಔಟ್ ನಿವಾಸಿಗಳಾದ ಕೀರ್ತಿರಾಜ್ (22) ಮತ್ತು ಸಂತೋಷ್ (22), ಯಲಹಂಕದ ಅನಂತಪುರದ ಗಿಲ್ಬರ್ಟ್ (21) ಬಂಧಿತರು. ಆರೋಪಿಗಳಿಂದ 29 ಇಂಚು ಉದ್ದದ ಮರ ಹಿಡಿಕೆ, ಕಬ್ಬಿಣದ ಲಾಂಗ್, ಚಾಕು, ದೊಣ್ಣೆ ಸೇರಿದಂತೆ ಹಲವು ವಿಧದ ಮಾರಕಾಸ್ತ್ರಗಳು, ಮಾರುತಿ ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.