‘ವಯಸ್ಸಾದ ಅಪ್ಪ ಅಮ್ಮನಿಗೆ ಲಸಿಕೆ ಹಾಕಿಸಬೇಕಿತ್ತು. ಹೀಗಾಗಿ ಬೆಳಿಗ್ಗೆ 7 ಗಂಟೆಗೇ ಹೋಗಿ ಟೋಕನ್ ಪಡೆದುಕೊಂಡಿದ್ದೆ. 9.45ಕ್ಕೆ ಅಪ್ಪ ಅಮ್ಮನನ್ನು ಕರೆದುಕೊಂಡು ಬರುವಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಸೂಚಿಸಿದ್ದರು. ಪೋಷಕರು ಮಧು ಮೇಹದಿಂದ ಬಳಲುತ್ತಿದ್ದಾರೆ. ಹೀಗಾಗಿ ಉಪಾಹಾರವಿದ್ದ ಬಾಕ್ಸ್ನೊಂದಿಗೆ ನಿಗದಿತ ಸಮಯಕ್ಕೆ ಕೇಂದ್ರದ ಬಳಿ ಹೋದೆ. 10.15ಕ್ಕೆ ಬಂದ ಸಿಬ್ಬಂದಿ, ‘ಇಲ್ಲಿ ಲಸಿಕೆ ನೀಡುವುದಿಲ್ಲ ನೀವೆಲ್ಲಾ ಕಲ್ಯಾಣ ಮಂಟಪಕ್ಕೆ ಹೋಗಿ’ ಅಂದರು. ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನೇ ಸರತಿ ಸಾಲಿನಲ್ಲಿ ನಿಂತೆ. ಸುಮಾರು ಸಮಯ ಕಾದರೂ ಲಸಿಕೆ ಸಿಗಲಿಲ್ಲ. ಸರ್ಕಾರದಿಂದ ನೀಡಿರುವ ಲಸಿಕೆಯನ್ನು ಶಾಸಕರು ತಮ್ಮ ಕಾರ್ಯಕರ್ತರಿಗೆ ಹೇಗೆ ಕೊಡುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಂಜು ಪ್ರಶ್ನಿಸಿದರು.