‘ಸುಮಾರು ಒಂದು ಗಂಟೆಯಿಂದ ವ್ಯಕ್ತಿ ಬಿದ್ದಿದ್ದ ವಿಷಯ ತಿಳಿಯಿತು. ವ್ಯಕ್ತಿ ಉಸಿರಾಡುತ್ತಿದ್ದರು. ವ್ಯಕ್ತಿಯನ್ನು ಮುಟ್ಟಲು ಜನ ಹಿಂದೇಟು ಹಾಕುತ್ತಿದ್ದರು. ಬಳಿಕ ನಾನು ಹಾಗೂ ಮತ್ತೆ ಮೂವರು ಸೇರಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿಕೊಂಡು ಅವರನ್ನು ಆಟೊರಿಕ್ಷಾದಲ್ಲಿ ಕೂರಿಸಿ ಅವರನ್ನು ಕುರುಬರಹಳ್ಳಿಯ ಲೋಟಸ್ ಆಸ್ಪತ್ರೆಗೆ ಕಳುಹಿಸಿದೆವು’ ಎಂದು ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.