ಕೇರಳದ ಮುಡುಗ ಬುಡಕಟ್ಟು ಭಾಷೆಯ ಸಿನಿಮಾ ’ಆದಿವಾಸಿ’ ನಿರ್ದೇಶಕ ವಿಜೀಶ್ ಮಣಿ ಮಾತನಾಡಿ, ‘ಈ ರೀತಿಯ ಸಣ್ಣ ಬುಡಕಟ್ಟು ಸಮುದಾಯಗಳಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ.ಹಸಿವು, ಬಡತನ, ಅವಮಾನ, ಪ್ರಾಕೃತಿಕ ಮತ್ತು ವಾತಾವರಣದಲ್ಲಿನ ಬದಲಾವಣೆಗಳು ಈ ಸಮುದಾಯಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಇಂಥ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಯತ್ನವಾಗಬೇಕು. ಹೀಗಾಗಿ ತಾನು ಈ ರೀತಿ ಭಿನ್ನ ಸಮುದಾಯದ ಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದರು.