200 ವಾಹನಗಳನ್ನು ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಂಚಾರ ಪೊಲೀಸರಿಗೆ ತಿಳಿಸಿದ್ದರು. ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಬಿ.ಆರ್. ರವಿಕಾಂತೆಗೌಡ, ಡಿಸಿಪಿಗಳಾದ ಎಂ. ನಾರಾಯಣ, ಸೌಮ್ಯಲತಾ, ಇನ್ಸ್ಪೆಕ್ಟರ್ಗಳಾದ ವಿಜಿಕುಮಾರ್, ಗಿರಿರಾಜ್ ಹಾಗೂ ಸಿಬ್ಬಂದಿ ಹೆಚ್ಚಿನ ಮುತುರ್ವಜಿ ವಹಿಸಿ 100 ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಹನ ಒದಗಿಸುವ ಭರವಸೆಯನ್ನೂ ಸಂಚಾರ ಪೊಲೀಸರು ನೀಡಿದ್ದಾರೆ.