ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹74.81 ಲಕ್ಷ ಹಣ ಸಾಗಿಸುತ್ತಿದ್ದಕಸ್ಟಮ್ ಅಧಿಕಾರಿಯೊಬ್ಬರುತಪಾಸಣೆ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಅಧಿಕಾರಿಗಳಿಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.
ಕಸ್ಟಮ್ ಸೂಪರಿಡೆಂಟ್ ಆಗಿರುವ ಅಹ್ಮದ್, ತನ್ನ ಪತ್ನಿಯೊಂದಿಗೆ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿಲಖನೌಗೆ ಪ್ರಯಾಣಿಸುತ್ತಿದ್ದರು. ತಪಾಸಣೆ ವೇಣೆ ಅಹ್ಮದ್ ಅವರ ಬ್ಯಾಗ್ನಲ್ಲಿ ಭಾರಿ ಹಣ ಪತ್ತೆಯಾಗಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.
‘ಸಿಐಎಸ್ಎಫ್ ಅಧಿಕಾರಿಗಳು ಕಸ್ಟಮ್ ಅಧಿಕಾರಿಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ನಮ್ಮ ಮುಂದೆಯೂ ಹಾಜರು ಪಡಿಸಿಲ್ಲ. ಆದರೆ, ಅವರನ್ನು ಹಣದ ಸಮೇತ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಗೆ ಹಸ್ತಾಂತರಿಸಿರಬಹುದು. ಹಣದ ಮೂಲದ ಬಗ್ಗೆ ಇ.ಡಿ ಅಧಿಕಾರಿಗಳೇ ವಿಚಾರಣೆ ನಡೆಸಬಹುದು’ ಎಂದು ಈಶಾನ್ಯ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯಾವುದೇ ಪ್ರಯಾಣಿಕರು ಅನುಮತಿಯಲ್ಲದೆ ವಿಮಾನದಲ್ಲಿ ಭಾರಿ ಪ್ರಮಾಣದ ಹಣ ಸಾಗಿಸುವಂತಿಲ್ಲ. ಆದರೆ, ಅಹ್ಮದ್ ₹2 ಸಾವಿರ ಹಾಗೂ ₹500 ಮುಖಬೆಲೆಯ ಹಣದ ಕಂತೆಗಳನ್ನು ತನ್ನ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು.