<p><strong>ಬೆಂಗಳೂರು</strong>: ಹಣ ತರುವಂತೆ ಒತ್ತಾಯಿಸಿ ಪತ್ನಿ ಹಾಗೂ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದ ಆರೋಪದ ಅಡಿ ಪತಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಆಂಧ್ರಪ್ರದೇಶದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. </p>.<p>ಮಹಿಳೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.</p>.<p>ಸಹಾಯಕ ಪ್ರಾಧ್ಯಾಪಕಿ ಆಗಿರುವ ರಮ್ಯಶ್ರೀ ಅವರಿಗೆ 2021ರಲ್ಲಿ ಪುಲಿ ಸಾಯಿಕುಮಾರ್ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ. ಠಾಣಾ ವ್ಯಾಪ್ತಿಯ ಬಡಾವಣೆಯಲ್ಲಿ ದಂಪತಿ ನೆಲಸಿದ್ದಾರೆ. </p>.<p>‘ತುರ್ತು ಹಣ ಬೇಕಿದ್ದು ತಂದೆಯಿಂದ ಹಣ ಕೊಡಿಸುವಂತೆ ಸಾಯಿಕುಮಾರ್ ಒತ್ತಾಯಿಸಿದ್ದ. ಹಣ ತರಲು ರಮ್ಯಶ್ರೀ ಅವರು ನಿರಾಕರಿಸಿದ್ದರು. ಇದರಿಂದ ದಂಪತಿ ಮಧ್ಯೆ ಗಲಾಟೆ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.</p>.<p>‘ಹಣ ಕೊಡಿಸದೇ ಇದ್ದರೆ ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಪತಿ ಬೆದರಿಸಿ ಚಾಕು ತೋರಿಸಿದ್ದ. ಮನೆಯಲ್ಲಿದ್ದ ರಮ್ಯಶ್ರೀ ಅವರ ತಂದೆ ಗಲಾಟೆ ಬಿಡಿಸಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಆಗ ಸಾಯಿಕುಮಾರ್, ಅಡುಗೆ ಮನೆಯಲ್ಲಿದ್ದ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಎರಡು ವರ್ಷದಿಂದಲೂ ಹಣಕ್ಕಾಗಿ ಗಲಾಟೆ ಮಾಡಿದ್ದ. ಆಗಲೂ ಒಪ್ಪಿರಲಿಲ್ಲ. ಹಲ್ಲೆ ನಡೆಸಿದ್ದ. ಗಲಾಟೆ ಸಂಬಂಧ 2023ರಲ್ಲಿ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಿದ್ದೆ ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಣ ತರುವಂತೆ ಒತ್ತಾಯಿಸಿ ಪತ್ನಿ ಹಾಗೂ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದ ಆರೋಪದ ಅಡಿ ಪತಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಆಂಧ್ರಪ್ರದೇಶದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. </p>.<p>ಮಹಿಳೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.</p>.<p>ಸಹಾಯಕ ಪ್ರಾಧ್ಯಾಪಕಿ ಆಗಿರುವ ರಮ್ಯಶ್ರೀ ಅವರಿಗೆ 2021ರಲ್ಲಿ ಪುಲಿ ಸಾಯಿಕುಮಾರ್ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ. ಠಾಣಾ ವ್ಯಾಪ್ತಿಯ ಬಡಾವಣೆಯಲ್ಲಿ ದಂಪತಿ ನೆಲಸಿದ್ದಾರೆ. </p>.<p>‘ತುರ್ತು ಹಣ ಬೇಕಿದ್ದು ತಂದೆಯಿಂದ ಹಣ ಕೊಡಿಸುವಂತೆ ಸಾಯಿಕುಮಾರ್ ಒತ್ತಾಯಿಸಿದ್ದ. ಹಣ ತರಲು ರಮ್ಯಶ್ರೀ ಅವರು ನಿರಾಕರಿಸಿದ್ದರು. ಇದರಿಂದ ದಂಪತಿ ಮಧ್ಯೆ ಗಲಾಟೆ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.</p>.<p>‘ಹಣ ಕೊಡಿಸದೇ ಇದ್ದರೆ ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಪತಿ ಬೆದರಿಸಿ ಚಾಕು ತೋರಿಸಿದ್ದ. ಮನೆಯಲ್ಲಿದ್ದ ರಮ್ಯಶ್ರೀ ಅವರ ತಂದೆ ಗಲಾಟೆ ಬಿಡಿಸಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಆಗ ಸಾಯಿಕುಮಾರ್, ಅಡುಗೆ ಮನೆಯಲ್ಲಿದ್ದ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಎರಡು ವರ್ಷದಿಂದಲೂ ಹಣಕ್ಕಾಗಿ ಗಲಾಟೆ ಮಾಡಿದ್ದ. ಆಗಲೂ ಒಪ್ಪಿರಲಿಲ್ಲ. ಹಲ್ಲೆ ನಡೆಸಿದ್ದ. ಗಲಾಟೆ ಸಂಬಂಧ 2023ರಲ್ಲಿ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಿದ್ದೆ ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>