‘ಹೆಣ್ಣೂರು ಠಾಣೆ ವ್ಯಾಪ್ತಿಯ ಎಚ್ಬಿಆರ್ ಬಡಾವಣೆಯಲ್ಲಿ ಜೂನ್ 7ರಂದುಆರೋಪಿಗಳು ಆಟೊದಲ್ಲಿ ಹೊರಟಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಆಟೊದ ಹೆಡ್ಲೈಟ್ ಇಲ್ಲದಿರುವುದನ್ನು ಗಮನಿಸಿದ್ದರು. ಅನುಮಾನಗೊಂಡು ಆಟೊ ನಿಲ್ಲಿಸಲು ಮುಂದಾಗಿದ್ದರು. ಆದರೆ, ಆರೋಪಿಗಳು ಪರಾರಿಯಾ ಗಲು ಯತ್ನಿಸಿದ್ದರು. ಬೆನ್ನಟ್ಟಿದ್ದ ಸಿಬ್ಬಂದಿ, ಆಟೊ ಅಡ್ಡಗಟ್ಟಿದ್ದರು.’ ‘ಬರ್ಕತ್ ಹಾಗೂ ಇಮ್ರಾನ್ ಪಾಷಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರು. ಸುಹೈಲ್ ಓಡಿಹೋದ. ಆಟೊದಲ್ಲಿ ಪರಿಶೀಲನೆ ನಡೆಸಿದಾಗ, ಹಸುವಿನ ಮಾಂಸ ಇರುವುದು ಗೊತ್ತಾಯಿತು’ ಎಂದೂ ಹೇಳಿದರು.