ಹಣ ಪಡೆದಿದ್ದ ಆರೋಪಿಗಳ ತಂಡ, ರಾಜಶೇಖರ್ ಹಾಗೂ ಅವರ ಪತ್ನಿ ಹೊರಟಿದ್ದ ಬೈಕ್ಗೆ ಕಾರು ಗುದ್ದಿಸಿ ಹಲ್ಲೆ ಮಾಡಲು ಮುಂದಾಗಿತ್ತು. ಸ್ಥಳದಲ್ಲಿ ಸ್ಥಳೀಯರು ಹೆಚ್ಚು ಜಮಾಯಿಸಿದ್ದರಿಂದ ರಾಜಶೇಖರ್ ಅವರನ್ನು ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಆರೋಪಿಗಳು ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಬಗ್ಗೆ ರಾಜಶೇಖರ್ ನೀಡಿದ್ದ ದೂರಿನನ್ವಯ ಸೋಲದೇವನಳ್ಳಿ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆದಿತ್ತು.