‘ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೆ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಈಗಿರುವ ಕಟ್ಟಡದಲ್ಲಿ ಎಲ್ಲ ನ್ಯಾಯಮೂರ್ತಿಗಳಿಗೂ ಕೋರ್ಟ್ ಹಾಲ್ಗಳು ಮತ್ತು ಅವರ ಛೇಂಬರ್ಗಳ ಕೊರತೆ ಬಾಧಿಸುತ್ತಿದೆ. ಅಷ್ಟೇಕೆ, ಈಗಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಅನೇಕ ಕಚೇರಿಗಳಿವೆ. ಈ ಕಚೇರಿಗಳ ಸಿಬ್ಬಂದಿ, ಸೂಕ್ತ ಗಾಳಿ–ಬೆಳಕು ಇಲ್ಲದೆ ಅಮಾನವೀಯ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಕೇಳುವವರು ಯಾರು’ ಎಂದು ಖಾರವಾಗಿ ಪ್ರಶ್ನಿಸಿದರು.