'ಪ್ರತಿಮೆಯು ಕೋರ್ಟ್ ಆವರಣದಲ್ಲಿದ್ದ ಕಾರಣ ಪ್ರತಿವರ್ಷ ಆಗಸ್ಟ್ 23ರಂದು ಆಚರಿಸುವ ಕಬ್ಬನ್ ಜನ್ಮದಿನಾಚರಣೆ ವೇಳೆ ಕಲಾಪಗಳಿಗೆ ಅಡಚಣೆಯಾಗುತ್ತಿತ್ತು. ಪ್ರವಾಸಿಗರಿಗೂ ಕೋರ್ಟ್ ಆವರಣ ಪ್ರವೇಶಿಸಿ, ಪ್ರತಿಮೆ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ನ್ಯಾಯಾಲಯ ಹಾಗೂ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿಮೆ ಸ್ಥಳಾಂತರಿಸಿ, ಮರುಪ್ರತಿಷ್ಠಾಪನೆ ಮಾಡಲಾಗಿದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.