ಜಾಥಾದ ನೇತೃತ್ವ ವಹಿಸಿಕೊಂಡಿರುವ ಡಾ. ಸಾನಂದಕುಮಾರ್ ಸಿಂಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿ, ‘ಅ.2 ರಂದು ಜಮ್ಮು ಮತ್ತು ಕಾಶ್ಮೀರದ ಗಾಂಧಿ ಸ್ಮಾರಕದಿಂದ ಈ ಸೈಕಲ್ ಜಾಥಾ ಆರಂಭವಾಗಿದ್ದು, ಈಗಾಗಲೇ 13 ರಾಜ್ಯಗಳನ್ನು ಸುತ್ತಿ, ಪರಿಸರ ಜಾಗೃತಿ ಮೂಡಿಸಿದ್ದೇವೆ. ಈಗಕರ್ನಾಟಕವನ್ನೂ ಸುತ್ತಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.
ಆಂಧ್ರ ಪ್ರದೇಶ, ತಮಿಳುನಾಡು, ಪಾಂಡಿಚೇರಿ ಸೇರಿ ನಾನಾ ರಾಜ್ಯಗಳನ್ನು ಸುತ್ತಿ, ಅಂತಿಮವಾಗಿ 2020ರ ಜ.30ಕ್ಕೆ ಕನ್ಯಾಕುಮಾರಿ ಸೇರಲಿದ್ದೇವೆ’ ಎಂದರು.