ಸ್ಥಳೀಯರು ನೀಡಿದ್ದ ಮಾಹಿತಿ: ‘ಸದಾನಂದ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಮದ್ಯವ್ಯಸನಿ ಆಗಿದ್ದ ಎನ್ನಲಾದ ಸದಾನಂದ, ನಿತ್ಯವೂ ಪತ್ನಿ ಜೊತೆ ಜಗಳ ಮಾಡುತ್ತಿದ್ದರು. ಜುಲೈ 26ರಂದು ನಡೆಯಬೇಕಿದ್ದ ದೊಡ್ಡ ಮಗಳ ಸೀಮಂತ ಕಾರ್ಯಕ್ರಮಕ್ಕೆ ಜುಲೈ 25ರಂದೇ ದಿನಸಿ ತಂದುಕೊಟ್ಟಿದ್ದ ಅವರು, ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ಮನೆಗೆ ಬಂದಿದ್ದ ಅವರು, ಕೊಠಡಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.