ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಸಂಪ್‌ಗಳು

Last Updated 2 ಜನವರಿ 2021, 20:45 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಇಲ್ಲಿನ ನರಸೀಪುರ ತೋಪಿನಲ್ಲಿ ನಿರ್ಮಾಣವಾಗುತ್ತಿರುವ ಹಾಲು ಶೀತಲೀಕರಣ ಘಟಕ (ಬಿಎಂಸಿ) ಕಟ್ಟಡದ ನೀರಿನ ಸಂಪ್‌ಗಳನ್ನು ಮುಚ್ಚಲಾಗಿದೆ.

ಈ ಕುರಿತು ‘ಬಾಯ್ತೆರೆದು ನಿಂತಿವೆ ಸಂಪ್‌ಗಳು!’ ಶೀರ್ಷಿಕೆ ಯಡಿ‘ಪ್ರಜಾವಾಣಿ’ಯಲ್ಲಿ ಶನಿವಾರ (ಡಿ.2) ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಡೇರಿ ಆಡಳಿತ ಮಂಡಳಿ ಹಾಗೂ ಕಟ್ಟಡದ ಗುತ್ತಿಗೆದಾರರು ಸಂಪ್‌ಗಳನ್ನು ಮುಚ್ಚಿದ್ದಾರೆ.

ಎರಡೂ ಸಂಪ್‌ಗಳುಹಲವು ತಿಂಗಳಿನಿಂದ ಬಾಯ್ತೆರೆದುಕೊಂಡಿದ್ದವು. ಇದರಿಂದ ಮಕ್ಕಳು ಹಾಗೂ ಜನರಿಗೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು.

ಪಂಚಾಯಿತಿ ಕಚೇರಿ ಹಿಂಭಾಗದಲ್ಲೇ ಬಿಎಂಸಿ ಕಟ್ಟಡ ನಿರ್ಮಾಣ ಮಾಡಲಾ ಗುತ್ತಿದೆ. ಸಮೀಪದಲ್ಲೇ ಅಂಚೆ ಕಚೇರಿ ಇದ್ದು, ಮಾಸಾಶನ ಪಡೆಯಲು ಜನ ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಂಪ್‌ಗಳಿಂದಅಪಾಯ ಖಂಡಿತ. ಅನಾ ಹುತಕ್ಕೆ ಕಾರಣವಾಗುವ ಸಂಪ್‌ಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT