ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೋಗನಹಳ್ಳಿ ಗ್ರಾಮದಲ್ಲಿ ಸ್ಮಶಾನ, ದೇವಸ್ಥಾನ ನೆಲಸಮ: ದಲಿತ ಸಂಘಟನೆ ಪ್ರತಿಭಟನೆ

Published 6 ಮಾರ್ಚ್ 2024, 16:20 IST
Last Updated 6 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದಲ್ಲಿ ಸ್ಮಶಾನ ಹಾಗೂ ದೇವಾಲಯವನ್ನು ನೆಲಸಮ ಮಾಡಿ ಆ ಜಾಗವನ್ನು ಆದರ್ಶ ಡೆವಲಪರ್ಸ್‌ನವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದ ಸರ್ವೇ 33/1 ರಲ್ಲಿ 1 ಎಕರೆ 39 ಗುಂಟೆ ಜಾಗದಲ್ಲಿ ಸ್ಮಶಾನ ಇದ್ದು ಅಲ್ಲಿ ಚಿಕ್ಕದಾದ ಶ್ರೀಅಂಗಳ ಪರಮೇಶ್ವರಿ ದೇವಾಲಯ ಇತ್ತು. ಗ್ರಾಮಸ್ಥರು ಶವ ಸಂಸ್ಕಾರದ ಸಂದರ್ಭದಲ್ಲಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆಸುವ ಪದ್ದತಿ ರೂಢಿಯಲ್ಲಿದೆ. ಈಗ ಆದರ್ಶ ಡೆವಲಪರ್ಸ್‌ನವರು ಇದೇ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರು ದೂರಿದರು.

ಸ್ಮಶಾನ ಮತ್ತು ದೇವಾಲಯ ನೆಲಸಮ ಮಾಡಿರುವ ಕುರಿತು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದೆವು. ತಹಶೀಲ್ದಾರ್ ಅವರು ಸ್ಥಳದ ಸರ್ವೆ ನಡೆಸಲು ಆದೇಶಿಸಿದ್ದರು.  ನಂತರ ಸರ್ವೆ ಪ್ರಕಾರ ಈ ಜಾಗ ಸ್ಮಶಾನಕ್ಕೆ ಸೇರಿದೆ ಎಂದು ನಾಮಫಲಕ ಹಾಕಿಸಿದ್ದರು. ಆದರ್ಶ ಡೆವಲಪರ್ಸ್‌ನವರು ನಾಮಫಲಕವನ್ನು ಕಿತ್ತು ಎಸೆದು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಬೇಕು’ ಎಂದು ರಾಜ್ಯಾಧ್ಯಕ್ಷ ಸೋರಹುಣುಸೆ ಎನ್.ವೆಂಕಟೇಶ್ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ರಾಮಕೃಷ್ಣ, ಜಯಕುಮಾರ್, ರಾಜ್ಯ ಯುವ ಘಟಕ ಅಧ್ಯಕ್ಷ ಎನ್.ವಿಜಯಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸತ್ಯವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT