ಕೊಲೆ ಪ್ರಕರಣದಲ್ಲಿ ಮೂರು ಮಂದಿ ಪ್ರತ್ಯಕ್ಷ ಸಾಕ್ಷಿಗಳ ಪೈಕಿ ಪಟ್ಟಣಗೆರೆ ಶೆಡ್ನ ಭದ್ರತಾ ಸಿಬ್ಬಂದಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ ಎನ್ನಲಾಗಿದೆ. ‘ದರ್ಶನ್ ಸಾಬ್ ಆಯಾತಾ (ದರ್ಶನ್ ಸಾಹೇಬರು ಬಂದಿದ್ದರು). ರೇಣುಕಸ್ವಾಮಿಗೆ ಮರದ ರೆಂಬೆಯಲ್ಲಿ ಹೊಡೆದ ಶಬ್ಧ ಕೇಳಿದ್ದೇನೆ. ಆ ಸಂದರ್ಭದಲ್ಲಿ ನಾನು ಹೊರಗೆ ಇದ್ದೆ’ ಎಂದು ಪಟ್ಟಣಗೆರೆ ಶೆಡ್ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.
ಮೃತದೇಹವನ್ನು ಬಿಸಾಡಿದ ಬಳಿಕ ಬಿಳಿ ಬಣ್ಣದ ವಾಹನದಲ್ಲಿ ಆರೋಪಿಗಳು ತೆರಳಿದರು.