<p>ಬೆಂಗಳೂರು: ಗ್ರಾಹಕರಿಗೆ ಆಹಾರ ತಲುಪಿಸಲು ಹೊರಟಿದ್ದ ಡೆಲಿವರಿ ಬಾಯ್ ಸುನೀಲ್ ರಾಥೋಡ್ ಎಂಬುವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿ ದ್ವಿಚಕ್ರ ವಾಹನ ಹಾಗೂ ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ.</p>.<p>ಘಟನೆ ಸಂಬಂಧ ಸುನೀಲ್, ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>’ಉತ್ತರ ಕರ್ನಾಟಕದ ಸುನೀಲ್, ಥಣಿಸಂದ್ರದಲ್ಲಿ ನೆಲೆಸಿದ್ದರು. ನ. 1ರಂದು ರಾತ್ರಿ 12 ಗಂಟೆಗೆ ಗ್ರಾಹಕರೊಬ್ಬರು ಆಹಾರ ಕಾಯ್ದಿರಿಸಿದ್ದರು. ನಾಗವಾರ ಸರ್ವೀಸ್ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಆಹಾರ ಪೊಟ್ಟಣ ಪಡೆದಿದ್ದ ಸುನೀಲ್, ದ್ವಿಚಕ್ರ ವಾಹನದಲ್ಲಿ ತಿರುಮೇನಹಳ್ಳಿ ಕಡೆ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮಾರ್ಗಮಧ್ಯ ಅವರನ್ನು ಅಡ್ಡಗಟ್ಟಿದ್ದ ಮೂವರು, ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿದ್ದರು. ₹ 1 ಸಾವಿರ ಕಿತ್ತುಕೊಂಡಿದ್ದರು. ನಂತರ, ದ್ವಿಚಕ್ರ ವಾಹನನ್ನು ಕಸಿದುಕೊಂಡು ಅದರ ಸಮೇತವೇ ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಗ್ರಾಹಕರಿಗೆ ಆಹಾರ ತಲುಪಿಸಲು ಹೊರಟಿದ್ದ ಡೆಲಿವರಿ ಬಾಯ್ ಸುನೀಲ್ ರಾಥೋಡ್ ಎಂಬುವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿ ದ್ವಿಚಕ್ರ ವಾಹನ ಹಾಗೂ ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ.</p>.<p>ಘಟನೆ ಸಂಬಂಧ ಸುನೀಲ್, ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>’ಉತ್ತರ ಕರ್ನಾಟಕದ ಸುನೀಲ್, ಥಣಿಸಂದ್ರದಲ್ಲಿ ನೆಲೆಸಿದ್ದರು. ನ. 1ರಂದು ರಾತ್ರಿ 12 ಗಂಟೆಗೆ ಗ್ರಾಹಕರೊಬ್ಬರು ಆಹಾರ ಕಾಯ್ದಿರಿಸಿದ್ದರು. ನಾಗವಾರ ಸರ್ವೀಸ್ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಆಹಾರ ಪೊಟ್ಟಣ ಪಡೆದಿದ್ದ ಸುನೀಲ್, ದ್ವಿಚಕ್ರ ವಾಹನದಲ್ಲಿ ತಿರುಮೇನಹಳ್ಳಿ ಕಡೆ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮಾರ್ಗಮಧ್ಯ ಅವರನ್ನು ಅಡ್ಡಗಟ್ಟಿದ್ದ ಮೂವರು, ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿದ್ದರು. ₹ 1 ಸಾವಿರ ಕಿತ್ತುಕೊಂಡಿದ್ದರು. ನಂತರ, ದ್ವಿಚಕ್ರ ವಾಹನನ್ನು ಕಸಿದುಕೊಂಡು ಅದರ ಸಮೇತವೇ ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>