‘ವ್ಯಕ್ತಿಯ ಮೊಬೈಲ್ ಫೋನ್ ಕಾರ್ಯಾಚರಣೆಯಲ್ಲಿದ್ದ ಕೊನೆಯ ಸ್ಥಳ ಮಾಗಡಿ ರಸ್ತೆ. ನಂತರ ಅವರ ಫೋನ್ ಸ್ಥಗಿತಗೊಂಡಿದೆ. ಆದರೆ, ಆ ವ್ಯಕ್ತಿ ನಮಗೆ ಉತ್ತರಹಳ್ಳಿಯ ವಿಳಾಸ ನೀಡಿದ್ದರು. ಮಾಗಡಿ ರಸ್ತೆಯ ಪ್ರದೇಶಗಳು ಪಶ್ಚಿಮ, ಆರ್.ಆರ್. ನಗರ ಮತ್ತು ದಾಸರಹಳ್ಳಿ ವಲಯದ ವ್ಯಾಪ್ತಿಗೆ ಬರುತ್ತವೆ. ಈಗ ನಾವು ಪೊಲೀಸರ ವರದಿ ಕಾಯುತ್ತಿದ್ದೇವೆ. ವ್ಯಕ್ತಿಯು ಪತ್ತೆಯಾಗಿ, ಅವರ ವಿಳಾಸ ಯಾವುದು ಎಂದು ದೃಢಪಟ್ಟರೆ, ಆ ವಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.