<p><strong>ಬೆಂಗಳೂರು</strong>: ಡೆಲ್ಟಾ ರೂಪಾಂತರ ತಳಿಯ ಕೊರೊನಾ ವೈರಾಣು ಸೋಂಕಿತ ವ್ಯಕ್ತಿಯು ಪತ್ತೆಯಾಗದಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.</p>.<p>29 ವರ್ಷದ ವ್ಯಕ್ತಿಯೊಬ್ಬರಿಗೆ ಡೆಲ್ಟಾ ದೃಢಪಟ್ಟಿತ್ತು. ಅವರು ಆಸ್ಪತ್ರೆಯಿಂದ ಬಿಡುಗಡೆಯನ್ನೂ ಹೊಂದಿದ್ದರು. ಆದರೆ, ಈವರೆಗೆ ಅವರ ಸುಳಿವು ಇಲ್ಲದಿರುವುದು ಮತ್ತು ಅವರ ಮೊಬೈಲ್ ಫೋನ್ ಸ್ಥಗಿತಗೊಂಡಿರುವುದರಿಂದ ಬಿಬಿಎಂಪಿಯ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದು, ಅವರನ್ನು ಪತ್ತೆ ಹೆಚ್ಚುವಂತೆ ಕೋರಿದ್ದಾರೆ.</p>.<p>‘ವ್ಯಕ್ತಿಯ ಮೊಬೈಲ್ ಫೋನ್ ಕಾರ್ಯಾಚರಣೆಯಲ್ಲಿದ್ದ ಕೊನೆಯ ಸ್ಥಳ ಮಾಗಡಿ ರಸ್ತೆ. ನಂತರ ಅವರ ಫೋನ್ ಸ್ಥಗಿತಗೊಂಡಿದೆ. ಆದರೆ, ಆ ವ್ಯಕ್ತಿ ನಮಗೆ ಉತ್ತರಹಳ್ಳಿಯ ವಿಳಾಸ ನೀಡಿದ್ದರು. ಮಾಗಡಿ ರಸ್ತೆಯ ಪ್ರದೇಶಗಳು ಪಶ್ಚಿಮ, ಆರ್.ಆರ್. ನಗರ ಮತ್ತು ದಾಸರಹಳ್ಳಿ ವಲಯದ ವ್ಯಾಪ್ತಿಗೆ ಬರುತ್ತವೆ. ಈಗ ನಾವು ಪೊಲೀಸರ ವರದಿ ಕಾಯುತ್ತಿದ್ದೇವೆ. ವ್ಯಕ್ತಿಯು ಪತ್ತೆಯಾಗಿ, ಅವರ ವಿಳಾಸ ಯಾವುದು ಎಂದು ದೃಢಪಟ್ಟರೆ, ಆ ವಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.</p>.<p>‘ವ್ಯಕ್ತಿಯು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಇದು ಮೂರು ವಾರಗಳ ಹಿಂದಿನ ಪ್ರಕರಣ. ಅಂದರೆ, ಇದು ಸಕ್ರಿಯವಾಗಿಲ್ಲದ ಪ್ರಕರಣ. ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಡೆಲ್ಟಾ ರೂಪಾಂತರ ತಳಿಯ ಕೊರೊನಾ ವೈರಾಣು ಸೋಂಕಿತ ವ್ಯಕ್ತಿಯು ಪತ್ತೆಯಾಗದಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.</p>.<p>29 ವರ್ಷದ ವ್ಯಕ್ತಿಯೊಬ್ಬರಿಗೆ ಡೆಲ್ಟಾ ದೃಢಪಟ್ಟಿತ್ತು. ಅವರು ಆಸ್ಪತ್ರೆಯಿಂದ ಬಿಡುಗಡೆಯನ್ನೂ ಹೊಂದಿದ್ದರು. ಆದರೆ, ಈವರೆಗೆ ಅವರ ಸುಳಿವು ಇಲ್ಲದಿರುವುದು ಮತ್ತು ಅವರ ಮೊಬೈಲ್ ಫೋನ್ ಸ್ಥಗಿತಗೊಂಡಿರುವುದರಿಂದ ಬಿಬಿಎಂಪಿಯ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದು, ಅವರನ್ನು ಪತ್ತೆ ಹೆಚ್ಚುವಂತೆ ಕೋರಿದ್ದಾರೆ.</p>.<p>‘ವ್ಯಕ್ತಿಯ ಮೊಬೈಲ್ ಫೋನ್ ಕಾರ್ಯಾಚರಣೆಯಲ್ಲಿದ್ದ ಕೊನೆಯ ಸ್ಥಳ ಮಾಗಡಿ ರಸ್ತೆ. ನಂತರ ಅವರ ಫೋನ್ ಸ್ಥಗಿತಗೊಂಡಿದೆ. ಆದರೆ, ಆ ವ್ಯಕ್ತಿ ನಮಗೆ ಉತ್ತರಹಳ್ಳಿಯ ವಿಳಾಸ ನೀಡಿದ್ದರು. ಮಾಗಡಿ ರಸ್ತೆಯ ಪ್ರದೇಶಗಳು ಪಶ್ಚಿಮ, ಆರ್.ಆರ್. ನಗರ ಮತ್ತು ದಾಸರಹಳ್ಳಿ ವಲಯದ ವ್ಯಾಪ್ತಿಗೆ ಬರುತ್ತವೆ. ಈಗ ನಾವು ಪೊಲೀಸರ ವರದಿ ಕಾಯುತ್ತಿದ್ದೇವೆ. ವ್ಯಕ್ತಿಯು ಪತ್ತೆಯಾಗಿ, ಅವರ ವಿಳಾಸ ಯಾವುದು ಎಂದು ದೃಢಪಟ್ಟರೆ, ಆ ವಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.</p>.<p>‘ವ್ಯಕ್ತಿಯು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಇದು ಮೂರು ವಾರಗಳ ಹಿಂದಿನ ಪ್ರಕರಣ. ಅಂದರೆ, ಇದು ಸಕ್ರಿಯವಾಗಿಲ್ಲದ ಪ್ರಕರಣ. ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>