ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗಾಗಿ ಅಲೆದಾಡಿದ ವೃದ್ಧೆ

Last Updated 23 ಮಾರ್ಚ್ 2020, 4:50 IST
ಅಕ್ಷರ ಗಾತ್ರ

ಬೆಂಗಳೂರು: 'ಸರ್‌ ಬೆಳಿಗ್ಗೆಯಿಂದ ಜ್ವರ ಸಾರ್‌... ಇಲ್ಲಿ ನೋಡಿದ್ರೆ ಒಂದೂ ಕ್ಲಿನಿಕ್ಕೂ ಸಿಕ್ತಿಲ್ಲ. ಕೈಯಲ್ಲಿ ದುಡ್ಡೂ ಇಲ್ಲ. ಡಾಕ್ಟ್ರು ಸಿಕ್ತಾರ ಅಂತ ಹುಡುಕಿಕೊಂಡು ಅಲಿತಿದ್ದೀನಿ. ನಡೆಯೋಕೂ ತ್ರಾಣ ಇಲ್ಲ...'

ಜನತಾ ಕರ್ಫ್ಯೂ ವೇಳೆ ವೈದ್ಯರನ್ನು ಹುಡುಕಿಕೊಂಡು ಶ್ರೀರಾಂಪುರದಲ್ಲಿ ಭಾನುವಾರ ಅಲೆಯುತ್ತಿದ್ದ 70 ವರ್ಷದ ವೃದ್ಧೆ ಸುಂದ್ರಿ ಅವರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡಿದ್ದು ಹೀಗೆ.

‘ಬೆಳಿಗ್ಗೆ ಜ್ವರ ಇತ್ತು. ಮನೆ ಹತ್ತಿರದ ಕ್ಲಿನಿಕ್‌ ಮುಚ್ಚಿತ್ತು. ದೊಡ್ಡಾಸ್ಪತ್ರೆ ಹುಡುಕಿಕೊಂಡು ಹೋಗುತ್ತಿದ್ದೇನೆ. ನನ್ನ ಬಳಿ ದುಡ್ಡೂ ಇಲ್ಲ. ಯಾರ ಹತ್ರನಾದ್ರೂ ಕೇಳನಾ ಅಂದ್ರ ಜನರೂ ಓಡಾಡುತ್ತಿಲ್ಲ. ಏನು ಮಾಡೋದೋ ತೋಚುತ್ತಿಲ್ಲ’ ಎಂದು ತಮ್ಮ ಸಂಕಷ್ಟ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT