ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್, ‘ರವೀಂದ್ರ ಕಲಾಕ್ಷೇತ್ರವು ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ವೇದಿಕೆಯಾಗಿದೆ. ಶಿವರಾಮ ಕಾರಂತ, ಪಿ.ಲಂಕೇಶ್, ಗಿರೀಶ್ ಕಾರ್ನಾಡ್ ಅವರಂತಹ ದೊಡ್ಡ ನಾಟಕಕಾರನ್ನು ನನಗೆ ಪರಿಚಯಿಸಿದ್ದು ಇದೇ ರವೀಂದ್ರ ಕಲಾಕ್ಷೇತ್ರ. ಅನೇಕರ ಬದುಕನ್ನು ಕಟ್ಟಿಕೊಟ್ಟಿದ್ದು ಮಾತ್ರವಲ್ಲ, ಬದುಕು ಏನು ಎಂಬುದನ್ನು ರವೀಂದ್ರ ಕಲಾಕ್ಷೇತ್ರ ತಿಳಿಸಿಕೊಟ್ಟಿದೆ’ ಎಂದರು.