<p><strong>ಬೆಂಗಳೂರು:</strong> ‘ಸುಪ್ರೀಂ ಕೋರ್ಟ್ ಕೆಲ ಶಾಸಕರನ್ನು ಅನರ್ಹರು ಎಂದು ಹೇಳಿತು. ಚುನಾವಣೆಯಲ್ಲಿ ಮತ್ತೆ ನಿಲ್ಲಬಾರದು ಎಂಬ ಕಾನೂನುಇಲ್ಲದ ಕಾರಣ ಸ್ಪರ್ಧೆಗೆ ಅವಕಾಶ ನೀಡಿತು. ಮತಗಟ್ಟೆ ವ್ಯವಸ್ಥೆ ಅವರನ್ನು ಮರು ಆಯ್ಕೆ ಮಾಡಿತು’ ಎಂದುಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಅವರು ಉತ್ತರಿಸಿದರು.</p>.<p>‘ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಸನ್ನಿವೇಶದಲ್ಲಿ ಸಮಾಜ ಇದೆ.ಮತದಾರರಿಂದ ಮಾತ್ರ ಹಾಳಾದ ವ್ಯವಸ್ಥೆ ಸರಿಪಡಿಸಲು ಸಾಧ್ಯ. ಮತಗಟ್ಟೆಯೇ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು’ ಎಂದರು.</p>.<p>‘ಚಿಕ್ಕಂದಿನಲ್ಲಿ ಶಾಲೆಗೆ ಹೋಗದೆ ಹಠ ಮಾಡುತ್ತಿದ್ದೆ. ನನ್ನ ತಾಯಿ ಶಾಲೆಗೆ ಹೋಗದಿದ್ದರೆ ಹೆಸರುಂಡೆ ಕೊಡುವುದಿಲ್ಲ ಎನ್ನುತ್ತಿದ್ದರು. ಅಮ್ಮನ ಹೆಸರುಂಡೆ ರುಚಿ ನನ್ನನ್ನು ಶಾಲೆಯೆಡೆಗೆ ಕಳುಹಿಸಿತು. ಇದರ ಫಲ ನಾನು ನ್ಯಾಯಮೂರ್ತಿ ಹುದ್ದೆಗೇರುವಂತೆ ಮಾಡಿತು’ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸುಪ್ರೀಂ ಕೋರ್ಟ್ ಕೆಲ ಶಾಸಕರನ್ನು ಅನರ್ಹರು ಎಂದು ಹೇಳಿತು. ಚುನಾವಣೆಯಲ್ಲಿ ಮತ್ತೆ ನಿಲ್ಲಬಾರದು ಎಂಬ ಕಾನೂನುಇಲ್ಲದ ಕಾರಣ ಸ್ಪರ್ಧೆಗೆ ಅವಕಾಶ ನೀಡಿತು. ಮತಗಟ್ಟೆ ವ್ಯವಸ್ಥೆ ಅವರನ್ನು ಮರು ಆಯ್ಕೆ ಮಾಡಿತು’ ಎಂದುಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಅವರು ಉತ್ತರಿಸಿದರು.</p>.<p>‘ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಸನ್ನಿವೇಶದಲ್ಲಿ ಸಮಾಜ ಇದೆ.ಮತದಾರರಿಂದ ಮಾತ್ರ ಹಾಳಾದ ವ್ಯವಸ್ಥೆ ಸರಿಪಡಿಸಲು ಸಾಧ್ಯ. ಮತಗಟ್ಟೆಯೇ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು’ ಎಂದರು.</p>.<p>‘ಚಿಕ್ಕಂದಿನಲ್ಲಿ ಶಾಲೆಗೆ ಹೋಗದೆ ಹಠ ಮಾಡುತ್ತಿದ್ದೆ. ನನ್ನ ತಾಯಿ ಶಾಲೆಗೆ ಹೋಗದಿದ್ದರೆ ಹೆಸರುಂಡೆ ಕೊಡುವುದಿಲ್ಲ ಎನ್ನುತ್ತಿದ್ದರು. ಅಮ್ಮನ ಹೆಸರುಂಡೆ ರುಚಿ ನನ್ನನ್ನು ಶಾಲೆಯೆಡೆಗೆ ಕಳುಹಿಸಿತು. ಇದರ ಫಲ ನಾನು ನ್ಯಾಯಮೂರ್ತಿ ಹುದ್ದೆಗೇರುವಂತೆ ಮಾಡಿತು’ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>