<p><strong>ಬೆಂಗಳೂರು:</strong> ‘ಯಾವುದೇ ಗಲಭೆಗಳಲ್ಲಿ ಅಮಾಯಕರಿಗೆ ನಷ್ಟವಾಗಿದ್ದರೆ ಪರಿಹಾರ ಕೊಡಬೇಕು ಎಂಬ ಬಗ್ಗೆ ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಆದರೆ, ಈ ಕುರಿತು ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಹೀಗಾಗಿ, ಸೂಕ್ತ ಕಾನೂನು ರೂಪಿಸುವ ಕೆಲಸವಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಲಹೆ ನೀಡಿದರು.</p>.<p>ಬೆಂಗಳೂರು ನಾಗರಿಕರ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಿರುವ‘ಡಿ.ಜೆ ಹಳ್ಳಿ ಗಲಭೆಯ ಕೋಮುವಾದೀಕರಣ' ಎಂಬ ಸತ್ಯಶೋಧನಾ ವರದಿಯನ್ನು ಬುಧವಾರ ಆನ್ಲೈನ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಗಲಭೆ ಕುರಿತು ಅನೇಕರು ಸತ್ಯಶೋಧನಾ ವರದಿ ತಯಾರಿಸಿದರು. ಕಾಂಗ್ರೆಸ್ ಪಕ್ಷ ಕೂಡ ವರದಿ ಹೊರತಂದಿತು. ಆದರೆ, ಈಗ ಈ ಸಂಸ್ಥೆಗಳು ಮಾಡಿರುವ ವರದಿ ಸತ್ಯಕ್ಕೆ ಹತ್ತಿರವಾಗಿದೆ. ಖುದ್ದಾಗಿ ಸ್ಥಳಕ್ಕೆ ಹೋಗಿ ಜನರ, ಅಧಿಕಾರಿಗಳ ಹೇಳಿಕೆ ಪಡೆದು ವರದಿ ಮಾಡಿದ್ದಾರೆ’ ಎಂದರು.</p>.<p>‘ಲೂಟಿಕೋರರು, ಏಕತೆ ಮುರಿಯುವವರು, ಚುನಾವಣೆಯ ಕಾರಣದಿಂದ ಈ ಗಲಭೆಯನ್ನು ಬಳಸಿಕೊಳ್ಳುವವರು ಬಹಳಷ್ಟಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ತಾಳ್ಮೆ, ಸಹನೆ ಬೆಳೆಸುವ ಕೆಲಸವಾಗಬೇಕಾಗಿದೆ’ ಎಂದರು.</p>.<p>ಪತ್ರಕರ್ತ ಇಂದೂಧರ ಹೊನ್ನಾಪುರ, ‘ಬಹಳಷ್ಟು ಪ್ರಕರಣಗಳಲ್ಲಿ ಆ ಸಂದರ್ಭದ ಪ್ರಚೋದನೆಯಿಂದಾಗಿ ಗಲಭೆಗಳು ಆಗಿರುತ್ತವೆಯೇ ವಿನಾ ಪೂರ್ವನಿಯೋಜಿತವಾಗಿರುವುದಿಲ್ಲ. ಆದರೆ, ಆ ನಂತರ ಅವುಗಳಿಗೆ ಕೋಮುಬಣ್ಣ ಬಳಿಯಲಾಗುತ್ತದೆ ಮತ್ತು ಇಂತಹ ಘಟನೆಗಳಿಂದ ರಾಜಕೀಯ ಲಾಭ ಪಡೆಯಲಾಗುತ್ತದೆ’ ಎಂದರು.</p>.<p>‘ಗಲಭೆಯನ್ನು ಆ ಕ್ಷಣಕ್ಕೇ ಮುಗಿಸುವ ಶಕ್ತಿ ಇದ್ದದ್ದು ಪೊಲೀಸರಿಗೆ. ಜನರು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿಯೇ, ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ಹೇಳಿ ಆ ಪ್ರತಿಯನ್ನು ತೋರಿಸಿದ್ದರೆ ಪ್ರಕರಣ ಅಷ್ಟು ತೀವ್ರಸ್ವರೂಪ ಪಡೆಯುತ್ತಿರಲಿಲ್ಲ’ ಎಂದರು.</p>.<p>‘ಈ ಸತ್ಯಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಸಂಸ್ಥೆಯ ವಿನಯ್ ಶ್ರೀನಿವಾಸ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಯಾವುದೇ ಗಲಭೆಗಳಲ್ಲಿ ಅಮಾಯಕರಿಗೆ ನಷ್ಟವಾಗಿದ್ದರೆ ಪರಿಹಾರ ಕೊಡಬೇಕು ಎಂಬ ಬಗ್ಗೆ ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಆದರೆ, ಈ ಕುರಿತು ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಹೀಗಾಗಿ, ಸೂಕ್ತ ಕಾನೂನು ರೂಪಿಸುವ ಕೆಲಸವಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಲಹೆ ನೀಡಿದರು.</p>.<p>ಬೆಂಗಳೂರು ನಾಗರಿಕರ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಿರುವ‘ಡಿ.ಜೆ ಹಳ್ಳಿ ಗಲಭೆಯ ಕೋಮುವಾದೀಕರಣ' ಎಂಬ ಸತ್ಯಶೋಧನಾ ವರದಿಯನ್ನು ಬುಧವಾರ ಆನ್ಲೈನ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಗಲಭೆ ಕುರಿತು ಅನೇಕರು ಸತ್ಯಶೋಧನಾ ವರದಿ ತಯಾರಿಸಿದರು. ಕಾಂಗ್ರೆಸ್ ಪಕ್ಷ ಕೂಡ ವರದಿ ಹೊರತಂದಿತು. ಆದರೆ, ಈಗ ಈ ಸಂಸ್ಥೆಗಳು ಮಾಡಿರುವ ವರದಿ ಸತ್ಯಕ್ಕೆ ಹತ್ತಿರವಾಗಿದೆ. ಖುದ್ದಾಗಿ ಸ್ಥಳಕ್ಕೆ ಹೋಗಿ ಜನರ, ಅಧಿಕಾರಿಗಳ ಹೇಳಿಕೆ ಪಡೆದು ವರದಿ ಮಾಡಿದ್ದಾರೆ’ ಎಂದರು.</p>.<p>‘ಲೂಟಿಕೋರರು, ಏಕತೆ ಮುರಿಯುವವರು, ಚುನಾವಣೆಯ ಕಾರಣದಿಂದ ಈ ಗಲಭೆಯನ್ನು ಬಳಸಿಕೊಳ್ಳುವವರು ಬಹಳಷ್ಟಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ತಾಳ್ಮೆ, ಸಹನೆ ಬೆಳೆಸುವ ಕೆಲಸವಾಗಬೇಕಾಗಿದೆ’ ಎಂದರು.</p>.<p>ಪತ್ರಕರ್ತ ಇಂದೂಧರ ಹೊನ್ನಾಪುರ, ‘ಬಹಳಷ್ಟು ಪ್ರಕರಣಗಳಲ್ಲಿ ಆ ಸಂದರ್ಭದ ಪ್ರಚೋದನೆಯಿಂದಾಗಿ ಗಲಭೆಗಳು ಆಗಿರುತ್ತವೆಯೇ ವಿನಾ ಪೂರ್ವನಿಯೋಜಿತವಾಗಿರುವುದಿಲ್ಲ. ಆದರೆ, ಆ ನಂತರ ಅವುಗಳಿಗೆ ಕೋಮುಬಣ್ಣ ಬಳಿಯಲಾಗುತ್ತದೆ ಮತ್ತು ಇಂತಹ ಘಟನೆಗಳಿಂದ ರಾಜಕೀಯ ಲಾಭ ಪಡೆಯಲಾಗುತ್ತದೆ’ ಎಂದರು.</p>.<p>‘ಗಲಭೆಯನ್ನು ಆ ಕ್ಷಣಕ್ಕೇ ಮುಗಿಸುವ ಶಕ್ತಿ ಇದ್ದದ್ದು ಪೊಲೀಸರಿಗೆ. ಜನರು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿಯೇ, ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ಹೇಳಿ ಆ ಪ್ರತಿಯನ್ನು ತೋರಿಸಿದ್ದರೆ ಪ್ರಕರಣ ಅಷ್ಟು ತೀವ್ರಸ್ವರೂಪ ಪಡೆಯುತ್ತಿರಲಿಲ್ಲ’ ಎಂದರು.</p>.<p>‘ಈ ಸತ್ಯಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಸಂಸ್ಥೆಯ ವಿನಯ್ ಶ್ರೀನಿವಾಸ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>