‘ಅಧಿಕಾರಿಗಳಾದ ಚನ್ನಬಸಪ್ಪ ಹಾಗೂ ಛಲಪತಿ ಅವರಿಗೆ ನಿತ್ಯವೂ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೇವೆ. ಹೀಗಿದ್ದರೂ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಸ್ಥಳೀಯ ಶಾಸಕ ಕೆ.ಜೆ.ಜಾರ್ಜ್ ಅವರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಪೈಪ್ಲೈನ್ ಅಳವಡಿಸಲು ರಸ್ತೆಯನ್ನೂ ಅಗೆಯಲಾಗಿದ್ದು, ಇದರಿಂದಾಗಿ ಮನೆಗಳ ಆವರಣಕ್ಕೆ ಚರಂಡಿ ನೀರು ನುಗ್ಗುತ್ತಿದೆ. ದುರ್ವಾಸನೆಯಿಂದಾಗಿ ಮನೆಯಲ್ಲಿ ಇರಲೂ ಆಗುತ್ತಿಲ್ಲ’ ಎಂದೂ ಅಳಲು ತೋಡಿಕೊಂಡರು.