‘ನಾವು, ಕಾರ್ಮಿಕರು ಗೌರಿಬಿದನೂರು ಕಡೆಗೆ ನಡೆದು ಹೋಗುವುದನ್ನು ಗಮನಿಸಿದೆವು. ಗಡಿ ಭಾಗದಿಂದ ಅವರು ಬರುತ್ತಿದ್ದರು. ಆಗಲೇ ಮಧ್ಯಾಹ್ನವಾಗಿತ್ತು. ಯಾರೂ ಊಟ ಮಾಡಿರಲಿಲ್ಲ. ಕಾರ್ಮಿಕರಲ್ಲಿ ಕೆಲವರನ್ನು ಪೊಲೀಸರು ಥಳಿಸಿದ್ದರು. ಊರಿಗೆ ಹೋಗಬೇಕೆಂದು ಅವರು ಹೇಳುತ್ತಿದ್ದರು. ಅವರಿಗೆ ಊಟದ ವ್ಯವಸ್ಥೆ ಮಾಡಿ, ಅಧಿಕಾರಿಗಳೊಂದಿಗೆ
ಮಾತನಾಡಿ ಸಾರಿಗೆ ಸಂಸ್ಥೆ ಬಸ್ ನಲ್ಲಿ ಬೆಂಗಳೂರಿಗೆ ಕಳುಹಿಸಿದೆವು’ ಎಂದು ರಾಷ್ಟ್ರ ಸೇವಾ ದಳದ ಅಧ್ಯಕ್ಷ ಆಲಿಬಾಬಾ ಹೇಳಿದರು.