‘ಬೆಂಗಳೂರಿನಲ್ಲಿ ಆಗಾಗ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಅದೇ ಪಾರ್ಟಿಗಳಿಗೆ ತೆಲಂಗಾಣದ ನಾಲ್ವರು ಶಾಸಕರು ಹಾಗೂ ಸಿನಿಮಾ ತಾರೆಯರು ಬರುತ್ತಿದ್ದರೆಂದು ಉದ್ಯಮಿಗಳು ಹೇಳಿಕೆ ನೀಡಿದ್ದಾರೆ. ವಿಚಾರಣೆ ನಡೆಸಿ ಅವರನ್ನು ವಾಪಸು ಕಳುಹಿಸಲಾಗಿದೆ. ಉದ್ಯಮಿಗಳ ಹೇಳಿಕೆ ಪರಿಶೀಲಿಸಲಾಗುತ್ತಿದ್ದು, ಕೆಲ ಗೊಂದಲಗಳು ಇವೆ. ಹೀಗಾಗಿ, ಪುನಃ ವಿಚಾರಣೆಗೆ ಬರುವಂತೆ ಅವರಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾದ ನಂತರ, ಶಾಸಕರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.