<p>ಬೆಂಗಳೂರು: ಹವಾಮಾನ ಬದಲಾವಣೆ ಕುರಿತು ವಿಶ್ವದಾದ್ಯಂತ ಆಚರಿಸಿದ ‘ಅರ್ಥ್ ಅವರ್’ಗೆ ನಗರದಲ್ಲಿಯೂ ಶನಿವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.</p>.<p>ಶನಿವಾರ ರಾತ್ರಿ 8.30ರಿಂದ 9.30ರ ಅವಧಿಯಲ್ಲಿ ಬಹುತೇಕರು ತೀರಾ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಿ, ಉಳಿದ ವಿದ್ಯುತ್ ದೀಪಗಳನ್ನು ನಂದಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದರು.</p>.<p>ಪರಿಸರ ಕುರಿತಾದ ವರ್ಲ್ಡ್ ವೈಡ್್ ಫಂಡ್ (ಡಬ್ಲ್ಯುಡಬ್ಲ್ಯುಎಫ್) ಪ್ರತಿ ವರ್ಷ ಈ ‘ಅರ್ಥ್ ಅವರ್’ ಆಚರಿಸುತ್ತದೆ. ಪರಿಸರ ಸಂರಕ್ಷಣೆಯ ಜಾಗೃತಿಗಾಗಿಯೂ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. 14 ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದೆ.</p>.<p>ವಿದ್ಯುತ್ ಬಳಕೆಯನ್ನು ನಿಯಂತ್ರಿಸಿ, ತಾಪಮಾನವನ್ನು ಕಡಿಮೆ ಮಾಡುವ ಮೂಲಕ ಭೂಮಿಗೊಂದು ತಾಸು ಮೀಸಲಿಡುವ ಈ ಆಂದೋಲನಕ್ಕೆ ನಗರವೂ ಸಾಕ್ಷಿಯಾಯಿತು. ಪ್ರಮುಖವಾಗಿ ಬೆಸ್ಕಾಂ ಸಿಬ್ಬಂದಿ ತಮ್ಮ ಮನೆಗಳಲ್ಲಿ ಅನಗತ್ಯವಾದ ವಿದ್ಯುತ್ ದೀಪಗಳನ್ನು ಒಂದು ತಾಸು ಆರಿಸುವ ಮೂಲಕ ಬೆಂಬಲ ನೀಡಿದರು.</p>.<p>ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಮಾತ್ರವಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಶೇ 50ರಷ್ಟು ವಿದ್ಯುತ್ ದೀಪಗಳನ್ನು ಮಾತ್ರ ಉರಿಸಲಾಯಿತು. ವಿಧಾನಸೌಧ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಲ್ಲಿ ಮತ್ತು ಯು.ಬಿ. ಸಿಟಿ ಹಾಗೂ ಮಂತ್ರಿ ಮಾಲ್ ಸೇರಿದಂತೆ ಹಲವು ಶಾಪಿಂಗ್ ಮಾಲ್ಗಳಲ್ಲಿಯೂ ಈ ಒಂದು ತಾಸಿನಲ್ಲಿ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಲಾಯಿತು.</p>.<p>‘ಪ್ರತಿ ವರ್ಷದಂತೆ ಈ ಬಾರಿಯೂ ಈ ಅಭಿಯಾನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಬೆಸ್ಕಾಂ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಬಳಸುತ್ತಿದ್ದ ಸರಾಸರಿ ವಿದ್ಯುತ್ ಪ್ರಮಾಣ ಮತ್ತು ಮಾ.27ರ ರಾತ್ರಿ 8.30 ರಿಂದ 9.30ರ ಅವಧಿಯಲ್ಲಿ ಬಳಸುತ್ತಿದ್ದ ವಿದ್ಯುತ್ ಪ್ರಮಾಣ ಹೋಲಿಕೆ ಮಾಡಿದರೆ, ಎಷ್ಟು ಉಳಿತಾಯವಾಗಿದೆ ಎಂಬುದು ನಂತರ ತಿಳಿಯಲಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.</p>.<p class="Subhead">ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ:</p>.<p>‘ಬೆಂಗಳೂರಿನಲ್ಲಿ ಆಗಾಗ ವಿದ್ಯುತ್ ಕಡಿತವಾಗುತ್ತಲೇ ಇರುವುದರಿಂದ ನಮಗೆ ನಿತ್ಯವೂ ‘ಅರ್ಥ್ ಅವರ್’. ಈ ನಿಟ್ಟಿನಲ್ಲಿ ನೋಡುವುದಾದರೆ ನಾವು ದಿನವೂ ಪರಿಸರ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಂಡಿರುತ್ತೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವ್ಯಂಗ್ಯಭರಿತ ಪೋಸ್ಟ್ಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹವಾಮಾನ ಬದಲಾವಣೆ ಕುರಿತು ವಿಶ್ವದಾದ್ಯಂತ ಆಚರಿಸಿದ ‘ಅರ್ಥ್ ಅವರ್’ಗೆ ನಗರದಲ್ಲಿಯೂ ಶನಿವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.</p>.<p>ಶನಿವಾರ ರಾತ್ರಿ 8.30ರಿಂದ 9.30ರ ಅವಧಿಯಲ್ಲಿ ಬಹುತೇಕರು ತೀರಾ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಿ, ಉಳಿದ ವಿದ್ಯುತ್ ದೀಪಗಳನ್ನು ನಂದಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದರು.</p>.<p>ಪರಿಸರ ಕುರಿತಾದ ವರ್ಲ್ಡ್ ವೈಡ್್ ಫಂಡ್ (ಡಬ್ಲ್ಯುಡಬ್ಲ್ಯುಎಫ್) ಪ್ರತಿ ವರ್ಷ ಈ ‘ಅರ್ಥ್ ಅವರ್’ ಆಚರಿಸುತ್ತದೆ. ಪರಿಸರ ಸಂರಕ್ಷಣೆಯ ಜಾಗೃತಿಗಾಗಿಯೂ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. 14 ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದೆ.</p>.<p>ವಿದ್ಯುತ್ ಬಳಕೆಯನ್ನು ನಿಯಂತ್ರಿಸಿ, ತಾಪಮಾನವನ್ನು ಕಡಿಮೆ ಮಾಡುವ ಮೂಲಕ ಭೂಮಿಗೊಂದು ತಾಸು ಮೀಸಲಿಡುವ ಈ ಆಂದೋಲನಕ್ಕೆ ನಗರವೂ ಸಾಕ್ಷಿಯಾಯಿತು. ಪ್ರಮುಖವಾಗಿ ಬೆಸ್ಕಾಂ ಸಿಬ್ಬಂದಿ ತಮ್ಮ ಮನೆಗಳಲ್ಲಿ ಅನಗತ್ಯವಾದ ವಿದ್ಯುತ್ ದೀಪಗಳನ್ನು ಒಂದು ತಾಸು ಆರಿಸುವ ಮೂಲಕ ಬೆಂಬಲ ನೀಡಿದರು.</p>.<p>ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಮಾತ್ರವಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಶೇ 50ರಷ್ಟು ವಿದ್ಯುತ್ ದೀಪಗಳನ್ನು ಮಾತ್ರ ಉರಿಸಲಾಯಿತು. ವಿಧಾನಸೌಧ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಲ್ಲಿ ಮತ್ತು ಯು.ಬಿ. ಸಿಟಿ ಹಾಗೂ ಮಂತ್ರಿ ಮಾಲ್ ಸೇರಿದಂತೆ ಹಲವು ಶಾಪಿಂಗ್ ಮಾಲ್ಗಳಲ್ಲಿಯೂ ಈ ಒಂದು ತಾಸಿನಲ್ಲಿ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಲಾಯಿತು.</p>.<p>‘ಪ್ರತಿ ವರ್ಷದಂತೆ ಈ ಬಾರಿಯೂ ಈ ಅಭಿಯಾನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಬೆಸ್ಕಾಂ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಬಳಸುತ್ತಿದ್ದ ಸರಾಸರಿ ವಿದ್ಯುತ್ ಪ್ರಮಾಣ ಮತ್ತು ಮಾ.27ರ ರಾತ್ರಿ 8.30 ರಿಂದ 9.30ರ ಅವಧಿಯಲ್ಲಿ ಬಳಸುತ್ತಿದ್ದ ವಿದ್ಯುತ್ ಪ್ರಮಾಣ ಹೋಲಿಕೆ ಮಾಡಿದರೆ, ಎಷ್ಟು ಉಳಿತಾಯವಾಗಿದೆ ಎಂಬುದು ನಂತರ ತಿಳಿಯಲಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.</p>.<p class="Subhead">ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ:</p>.<p>‘ಬೆಂಗಳೂರಿನಲ್ಲಿ ಆಗಾಗ ವಿದ್ಯುತ್ ಕಡಿತವಾಗುತ್ತಲೇ ಇರುವುದರಿಂದ ನಮಗೆ ನಿತ್ಯವೂ ‘ಅರ್ಥ್ ಅವರ್’. ಈ ನಿಟ್ಟಿನಲ್ಲಿ ನೋಡುವುದಾದರೆ ನಾವು ದಿನವೂ ಪರಿಸರ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಂಡಿರುತ್ತೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವ್ಯಂಗ್ಯಭರಿತ ಪೋಸ್ಟ್ಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>