ಬೆಂಗಳೂರು: ‘ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿ ಶಿಕ್ಷಣ ಪಡೆದು ಮತ್ತೆ ಭಾರತಕ್ಕೆ ಹಿಂತಿರುಗಿ ಕೊಡುಗೆ ನೀಡಬೇಕು’ ಎಂದು ಡಿಆರ್ಡಿಒ ವಿಜ್ಞಾನಿ ಬಿ.ಕೆ. ದಾಸ್ ಹೇಳಿದರು.
ನಗರದ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ 2023–24ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಂಡ ಸಾಮರ್ಥ್ಯ, ಆತ್ಮವಿಶ್ವಾಸದಂತಹ ನಿರ್ಣಾಯಕ ಅಂಶಗಳು ವೃತ್ತಿಪರತೆ ಸಾಮರ್ಥ್ಯವನ್ನು ನಿರ್ಧರಿಸುತ್ತವೆ. ಭವ್ಯಭಾರತದ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ’ ಎಂದರು.
ಈಸ್ಟ್ ಪಾಯಿಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷೆ ರಮಾದೇವಿ ವೆಂಕಟಪತಿ, ‘ವಿದ್ಯಾರ್ಥಿಗಳು ಗುಣಾತ್ಮಕ ಹಾಗೂ ಮೌಲ್ಯಯುತ ಕಲಿಕೆಗೆ ಬೇಕಾದ ಎಲ್ಲ ಸುಸಜ್ಜಿತ ಆಧುನಿಕ ಸೌಲಭ್ಯಗಳನ್ನು ಒದಗಿಸಿದ್ದೇವೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕು’ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಮೋದ ಗೌಡ, ರಾಜೀವ್ ಗೌಡ, ಎಂ.ಜಿ. ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಪೀಟರ್ ಫ್ರಾನ್ಸಿಸ್, ಉಪಾಧ್ಯಕ್ಷ ಪ್ರಕಾಶ್, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮೃತ್ಯುಂಜಯ ವಿ. ಲಟ್ಟೆ, ಉಪಪ್ರಾಂಶುಪಾಲ ಯೋಗೇಶ್ ಇದ್ದರು.