ಕೆಂಗೇರಿ ಬಳಿ ತಡೆಗೋಡೆ ಕುಸಿದಿದ್ದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಮೇಯರ್, ‘ದಶಕಗಳ ಹಿಂದೆ ನಿರ್ಮಾಣಗೊಂಡ ತಡೆಗೋಡೆ ಇದು. ರಸ್ತೆ ಕಾಮಗಾರಿ ನಿರ್ವಹಿಸುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಳೆ ತಡೆಗೋಡೆಯ ಸಾಮರ್ಥ್ಯ ಪರಿಶೀಲಿಸದೆ ಅದರ ಮೇಲೆಯೇ ಹೊಸದಾಗಿ ಗೋಡೆ ನಿರ್ಮಿಸಿದ್ದಾರೆ. ಜೋರು ಮಳೆ ಬಂದಾಗ ನೀರು ಹೆಚ್ಚಾಗಿ ಗೋಡೆ ಕುಸಿದಿದೆ’ ಎಂದರು.