ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ವಿವಿಧ ಇಲಾಖೆಗಳಿಂದ ಸಂಘದ ರಾಜ್ಯ ಪರಿಷತ್ಗೆ ಆಯ್ಕೆಯಾದ ಸದಸ್ಯರು ಸೇರಿ ಒಟ್ಟು 548 ಮತದಾರರಿದ್ದು, ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಕ್ರಮವಾಗಿ ಹಾಲಿ ಅಧ್ಯಕ್ಷ ಎಚ್.ಕೆ. ರಾಮು ಮತ್ತು ಎಂ.ಸಿದ್ರಾಮಣ್ಣ, ಸಿ.ಎ. ಷಡಕ್ಷರಿ ಮತ್ತು ಆರ್. ಶ್ರೀನಿವಾಸ್, ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರ್, ಶಾಂತಾರಾಮ್ ಮತ್ತು ಬಿ. ಗಂಗಾಧರ್ ಹೀಗೆ ನಾಲ್ಕು ಪ್ಯಾನೆಲ್ಗಳಾಗಿ, ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು ಆಮಿಷ ಒಡ್ಡುತ್ತಿದ್ದಾರೆ.