<p><strong>ಬೆಂಗಳೂರು</strong>: ‘ಸಮಾಜದಲ್ಲಿ ಜಾತೀಯ ವಿಷಬೀಜಗಳು ಹೆಚ್ಚಾಗುತ್ತಿರುವಾಗ, ವಚನಗಳು ಸಂಜೀವಿನಿಯಾಗಿ ನಮ್ಮನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಿವೆ’ ಎಂದು ಶಿಕ್ಷಣ ತಜ್ಯ ಸೂಡಿ ಸುರೇಶ್ ಹೇಳಿದರು.</p>.<p>ವಚನಜ್ಯೋತಿ ಬಳಗ ಆಯೋಜನೆಯ ವಚನ ಶ್ರಾವಣದ 17ನೇ ದಿನ, ಮಾಗಡಿ ಮುಖ್ಯರಸ್ತೆಯ ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾತ್ಮ ಗಾಂಧಿಯವರ ಅಹಿಂಸೆ - ಸತ್ಯಾಗ್ರಹಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಸಮ ಸಮಾಜ ನಿರ್ಮಾಣ ತತ್ತ್ವಗಳನ್ನು ಒಂಬೈನೂರು ವರ್ಷಗಳ ಹಿಂದೆಯೇ ಪ್ರತಿಪಾದಿಸಿ ಆಚರಣೆಗೆ ತಂದ ನಿಜ ಮಹಾತ್ಮರು ಬಸವಣ್ಣ. ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನು ವಚನ ಚಳವಳಿಯಲ್ಲಿ ಅನುಷ್ಠಾನಕ್ಕೆ ತಂದ ಕೀರ್ತಿ ವಚನಕಾರರದು’ ಎಂದು ಬಣ್ಣಿಸಿದರು.</p>.<p>ಮಲ್ಲಿಕಾರ್ಜುನ ಗೌಡ ಮಾತನಾಡಿ, ‘ಜ್ಞಾನವನ್ನು ಹಂಚಿದ ವಚನಕಾರರು ತಮ್ಮ ಅನುಭಾವಗಳಲ್ಲಿ ಹಂಚಿರುವ ಭಾಷೆ ಇಂದಿನ ಆಧುನಿಕ ಕನ್ನಡಕ್ಕೂ ಮಿಗಿಲಾದ ಸರಳತೆ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ಒಂದು ಶಾಲೆಯಲ್ಲಿ ವಚನ ಶ್ರಾವಣವೆಂದರೆ, ಅದು ಸಂಸ್ಕೃತಿಯ ಹಬ್ಬ. ಮಕ್ಕಳು ವಚನಗಳನ್ನು ಕಲಿತು ಹಾಡುತ್ತಾರೆ, ಓದಿ ವ್ಯಾಖ್ಯಾನ ಮಾಡುತ್ತಾರೆ, ವೇಷಭೂಷಣ ಧರಿಸಿ ನಲಿಯುತ್ತಾರೆ ಎಂದು ಹರ್ಷಿಸಿದರು.</p>.<p>ಮೋಳಿಗೆ ಮಾರಯ್ಯ, ಮಡಿವಾಳ ಮಾಚಿದೇವ, ಆಯ್ದಕ್ಕಿ ಲಕ್ಕಮ್ಮ, ಮಹಾದೇವಿಯಕ್ಕ, ಸತ್ಯಕ್ಕ ಮೊದಲಾದ ವಚನಕಾರರ ವೇಷ ಧರಿಸಿದ ಎಸ್.ಎಸ್. ಪಬ್ಲಿಕ್ ಶಾಲೆಯ 25ಕ್ಕೂ ಹೆಚ್ಚು ಮಕ್ಕಳು ವಚನಗಳನ್ನು ಹಾಡಿ, ಅರ್ಥ ಹೇಳಿದರು. ವಚನಗಳಿಗೆ ನೃತ್ಯ ಮಾಡಿದರು.</p>.<p>ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ ರಾಜ್ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಮಾಜದಲ್ಲಿ ಜಾತೀಯ ವಿಷಬೀಜಗಳು ಹೆಚ್ಚಾಗುತ್ತಿರುವಾಗ, ವಚನಗಳು ಸಂಜೀವಿನಿಯಾಗಿ ನಮ್ಮನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಿವೆ’ ಎಂದು ಶಿಕ್ಷಣ ತಜ್ಯ ಸೂಡಿ ಸುರೇಶ್ ಹೇಳಿದರು.</p>.<p>ವಚನಜ್ಯೋತಿ ಬಳಗ ಆಯೋಜನೆಯ ವಚನ ಶ್ರಾವಣದ 17ನೇ ದಿನ, ಮಾಗಡಿ ಮುಖ್ಯರಸ್ತೆಯ ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾತ್ಮ ಗಾಂಧಿಯವರ ಅಹಿಂಸೆ - ಸತ್ಯಾಗ್ರಹಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಸಮ ಸಮಾಜ ನಿರ್ಮಾಣ ತತ್ತ್ವಗಳನ್ನು ಒಂಬೈನೂರು ವರ್ಷಗಳ ಹಿಂದೆಯೇ ಪ್ರತಿಪಾದಿಸಿ ಆಚರಣೆಗೆ ತಂದ ನಿಜ ಮಹಾತ್ಮರು ಬಸವಣ್ಣ. ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನು ವಚನ ಚಳವಳಿಯಲ್ಲಿ ಅನುಷ್ಠಾನಕ್ಕೆ ತಂದ ಕೀರ್ತಿ ವಚನಕಾರರದು’ ಎಂದು ಬಣ್ಣಿಸಿದರು.</p>.<p>ಮಲ್ಲಿಕಾರ್ಜುನ ಗೌಡ ಮಾತನಾಡಿ, ‘ಜ್ಞಾನವನ್ನು ಹಂಚಿದ ವಚನಕಾರರು ತಮ್ಮ ಅನುಭಾವಗಳಲ್ಲಿ ಹಂಚಿರುವ ಭಾಷೆ ಇಂದಿನ ಆಧುನಿಕ ಕನ್ನಡಕ್ಕೂ ಮಿಗಿಲಾದ ಸರಳತೆ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ಒಂದು ಶಾಲೆಯಲ್ಲಿ ವಚನ ಶ್ರಾವಣವೆಂದರೆ, ಅದು ಸಂಸ್ಕೃತಿಯ ಹಬ್ಬ. ಮಕ್ಕಳು ವಚನಗಳನ್ನು ಕಲಿತು ಹಾಡುತ್ತಾರೆ, ಓದಿ ವ್ಯಾಖ್ಯಾನ ಮಾಡುತ್ತಾರೆ, ವೇಷಭೂಷಣ ಧರಿಸಿ ನಲಿಯುತ್ತಾರೆ ಎಂದು ಹರ್ಷಿಸಿದರು.</p>.<p>ಮೋಳಿಗೆ ಮಾರಯ್ಯ, ಮಡಿವಾಳ ಮಾಚಿದೇವ, ಆಯ್ದಕ್ಕಿ ಲಕ್ಕಮ್ಮ, ಮಹಾದೇವಿಯಕ್ಕ, ಸತ್ಯಕ್ಕ ಮೊದಲಾದ ವಚನಕಾರರ ವೇಷ ಧರಿಸಿದ ಎಸ್.ಎಸ್. ಪಬ್ಲಿಕ್ ಶಾಲೆಯ 25ಕ್ಕೂ ಹೆಚ್ಚು ಮಕ್ಕಳು ವಚನಗಳನ್ನು ಹಾಡಿ, ಅರ್ಥ ಹೇಳಿದರು. ವಚನಗಳಿಗೆ ನೃತ್ಯ ಮಾಡಿದರು.</p>.<p>ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ ರಾಜ್ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>