ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ. ವಿಶ್ವನಾಥ, ‘ಮೇಳದಲ್ಲಿ ಕೈಮಗ್ಗ, ಜವಳಿ, ಕರಕುಶಲ ವಸ್ತುಗಳು ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ದೇಶದ ವಿವಿಧ ರಾಜ್ಯಗಳ 100 ಕರಕುಶಲ ಕರ್ಮಿಗಳು ಭಾಗವಹಿಸಲಿದ್ದು, ನೇರವಾಗಿ ತಮ್ಮ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ’ ಎಂದು ತಿಳಿಸಿದರು.