‘ಬೇಡಿಕೆಯಷ್ಟು ಕಣ್ಣುಗಳ ಸಂಗ್ರಹವಾಗುತ್ತಿಲ್ಲ. ಕಣ್ಣಿನಲ್ಲಿ ಗಾಯ, ಹುಣ್ಣುಗಳಾದರೆ ಶಾಶ್ವತವಾಗಿ ಕಣ್ಣನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ದಿನಕ್ಕೆ 300ರಿಂದ 400 ಮಂದಿ ಮೃತಪಡುತ್ತಿದ್ದಾರೆ. ಆದರೆ, ಇವುಗಳಲ್ಲಿ 8ಕ್ಕಿಂತ ಕಡಿಮೆ ಕಣ್ಣುಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಕಾರ್ನಿಯಾದ ಕುರುಡುತನವನ್ನು ನೇತ್ರದಾನದಿಂದ ಕಸಿ ಮಾಡುವ ಮೂಲಕ ಚಿಕಿತ್ಸೆ ನೀಡಬಹುದು. ಮಾನವ ಅಂಗಾಂಶಕ್ಕೆ ಪರ್ಯಾಯ ಇಲ್ಲ’ ಎಂದು ಹೇಳಿದರು.