‘ಕಾರು ಮಾರಾಟ ಸಂಬಂಧ ಅಮಿತ್ಸಿಂಗ್ ಎಂಬಾತ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದ. ಅದನ್ನು ನಂಬಿದ್ದ ಮಂಜುನಾಥ್, ಕರೆ ಮಾಡಿ ಮಾತನಾಡಿದ್ದರು. ಕಾರಿನ ಫೋಟೊ ಕಳುಹಿಸಿದ್ದ ಆರೋಪಿ, ಖರೀದಿಗೂ ಮುನ್ನ ಭದ್ರತಾ ಠೇವಣಿ ಕಟ್ಟಬೇಕೆಂದು ಹೇಳಿದ್ದ. ಅದನ್ನು ನಂಬಿದ್ದ ಮಂಜುನಾಥ್, ಹಂತ ಹಂತವಾಗಿ ₹ 2 ಲಕ್ಷ ಪಾವತಿಸಿದ್ದರು. ನಂತರ, ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.