ಇದೇ ಕಾಶಿ, ಕೈಲಾಸದಂತೆ: ಶಿಕ್ಷಕ ಮಂಜುನಾಥ್ ಮಾತನಾಡಿ, ‘ನಮ್ಮ ತಂದೆ ಸಿದ್ದಪ್ಪ, ತಾಯಿ ಲಿಂಗಮ್ಮ ಕೃಷಿ ಕೂಲಿಕಾರ್ಮಿಕರಾಗಿದ್ದರು. ಕೂಲಿನಾಲಿ ಮಾಡಿ ನಮ್ಮ ಅಣ್ಣ ಶಿವಣ್ಣ ಮತ್ತು ನನ್ನನ್ನು ವಿದ್ಯಾವಂತರನ್ನಾಗಿಸಿದರು. ಶಿಕ್ಷಕನಾದ ನಾನು ಕೇವಲ ತರಗತಿಯಲ್ಲಿ ಮಕ್ಕಳ ಎದುರಿನಲ್ಲಿ ತಾಯಿತಂದೆ ದೇವರೆಂದು ಪಾಠಬೋದಿಸಿ, ಮನೆ ಯಲ್ಲಿ ಮರೆಯುವುದು ಸರಿಯಲ್ಲ ಎಂದು ಅಣ್ಣತಮ್ಮ ಸೇರಿ ಮಾತಾಪಿತರ ಮಂದಿರ ನಿರ್ಮಿಸಿದ್ದೇವೆ. ನಮಗೆ ಇದೆ ಕಾಶಿ, ಕೈಲಾಸದಂತಿದೆ’ ಎಂದರು.