<p><strong>ಬೆಂಗಳೂರು: </strong>ಆದಿವಾಸಿಗಳ ಕಲ್ಯಾಣಕ್ಕಾಗಿ ಹೋರಾಡಿ ಮಡಿದ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಸಂತ ಪದವಿ ನೀಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರಿಗೆ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಮನವಿ ಮಾಡಿದೆ.</p>.<p>ನಗರದಲ್ಲಿ ಗುರುವಾರ ಆನ್ಲೈನ್ನಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಈ ವಿಷಯ ಮಂಡಿಸಿದರು. ಭಾರತದಲ್ಲಿರುವ ರೋಮ್ನ ರಾಯಭಾರಿ ಹಾಗೂ ಭಾರತದ ಧರ್ಮಾಧ್ಯಕ್ಷರ ಕೂಟಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.</p>.<p>ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಅದಿವಾಸಿಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಸ್ಟ್ಯಾನ್ ಸ್ವಾಮಿಯವರು. ಕಠಿಣವಾದ ಯುಎಪಿಎ ಜಾರಿ ಮಾಡುವ ಮೂಲಕ ಪ್ರಭುತ್ವವು ಅವರ ಸಾವಿಗೆ ಕಾರಣವಾಗಿದೆ. ಈ ಕಾಯ್ದೆ ರದ್ದತಿಗೆ ಎಲ್ಲರೂ ಹೋರಾಡಬೇಕು’ ಎಂದರು.</p>.<p>ಫಾದರ್ ಸೈಮನ್ ಬರ್ತಲೊಮಿಯೊ ಅಧ್ಯಕ್ಷತೆ ವಹಿಸಿದ್ದರು. ಸಿ. ಮರಿಜೋಸೆಫ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ. ದೇವಕುಮಾರ್, ಶಿವಸುಂದರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಆದಿವಾಸಿಗಳ ಕಲ್ಯಾಣಕ್ಕಾಗಿ ಹೋರಾಡಿ ಮಡಿದ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಸಂತ ಪದವಿ ನೀಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರಿಗೆ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಮನವಿ ಮಾಡಿದೆ.</p>.<p>ನಗರದಲ್ಲಿ ಗುರುವಾರ ಆನ್ಲೈನ್ನಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಈ ವಿಷಯ ಮಂಡಿಸಿದರು. ಭಾರತದಲ್ಲಿರುವ ರೋಮ್ನ ರಾಯಭಾರಿ ಹಾಗೂ ಭಾರತದ ಧರ್ಮಾಧ್ಯಕ್ಷರ ಕೂಟಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.</p>.<p>ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಅದಿವಾಸಿಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಸ್ಟ್ಯಾನ್ ಸ್ವಾಮಿಯವರು. ಕಠಿಣವಾದ ಯುಎಪಿಎ ಜಾರಿ ಮಾಡುವ ಮೂಲಕ ಪ್ರಭುತ್ವವು ಅವರ ಸಾವಿಗೆ ಕಾರಣವಾಗಿದೆ. ಈ ಕಾಯ್ದೆ ರದ್ದತಿಗೆ ಎಲ್ಲರೂ ಹೋರಾಡಬೇಕು’ ಎಂದರು.</p>.<p>ಫಾದರ್ ಸೈಮನ್ ಬರ್ತಲೊಮಿಯೊ ಅಧ್ಯಕ್ಷತೆ ವಹಿಸಿದ್ದರು. ಸಿ. ಮರಿಜೋಸೆಫ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ. ದೇವಕುಮಾರ್, ಶಿವಸುಂದರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>