ವಿದ್ಯಾಶಿಲ್ಪ ಅಕಾಡೆಮಿಯ ಪ್ರಾಚಾರ್ಯರಾದ ಕಲೈ ಸೆಲ್ವಿ, ‘ಸಂಸ್ಥೆಯಲ್ಲಿ ವಿಎಸ್ಎ ಕ್ಯಾನ್ಸರ್ ಕೇರ್ ನಿಧಿ ಆರಂಭಿಸಲಾಗಿದೆ. ಇದಲ್ಲದೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ರೋಗ ಪೀಡಿತರ ಚಿಕಿತ್ಸೆಗೆ ಆರಂಭಿಕವಾಗಿ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು.