‘ಬಿಹಾರದ ಬಿಜಯ್, ಗೋದಾಮಿನಲ್ಲಿ ಕೆಲಸಕ್ಕೆ ಬಂದಿದ್ದ. ಟಿಪ್ಪರ್ನಲ್ಲಿ ತಂದಿದ್ದ ರಾಸಾಯನಿಕಗಳ ಡಬ್ಬಿಗಳೇ ಸ್ಫೋಟಕ್ಕೆ ಕಾರಣ. ಆ ರಾಸಾಯನಿಕಗಳನ್ನು ಟಿಪ್ಪರ್ನಿಂದ ಇಳಿಸಿ ಬ್ಯಾರಲ್ಗಳಿಗೆ ತುಂಬುವಂತೆ ಮಾಲೀಕರು ಹೇಳಿದ್ದರು.
ಅದರಂತೆ ಬಿಜಯ್, ಆ ಕೆಲಸದಲ್ಲಿ ನಿರತರಾಗಿದ್ದರು. ಅದೇ ವೇಳೆಯೇ ಗೋದಾಮಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಕ್ಷಣಮಾತ್ರದಲ್ಲಿ ಇಡೀ ಗೋದಾಮು ಆವರಿಸಿತ್ತು. ಬಿಜಯ್ ಸಹ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.