<p><strong>ಬೆಂಗಳೂರು:</strong> ಒಎಲ್ಎಕ್ಸ್ ಜಾಲತಾಣದಲ್ಲಿ ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಜೈಲಿನಿಂದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ರಾಜಸ್ಥಾನದ ಭರತ್ಪುರ ಜಿಲ್ಲೆಯ ವಾಜೀಬ್ ಖಾನ್ (30), ಸಾಹಿಲ್ (20), ಶಾಹೀದ್ (28) ಹಾಗೂ ಉಮೇರ್ ಖಾನ್ (31) ಬಂಧಿತರು.</p>.<p>ಆರೋಪಿಗಳ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವೊಂದರಲ್ಲಿ ಆಂಧ್ರಪ್ರದೇಶ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹೈದರಾಬಾದ್ನ ಕೇಂದ್ರ ಕಾರಾಗೃಹದಲ್ಲಿಇಟ್ಟಿದ್ದರು.</p>.<p>ಬೆಂಗಳೂರಿನಲ್ಲಿ ನಡೆದಿದ್ದ ಸೈಬರ್ ವಂಚನೆ ಪ್ರಕರಣಗಳಲ್ಲೂ ಆರೋಪಿಗಳು ಭಾಗಿಯಾಗಿ<br />ದ್ದರಿಂದ ನ್ಯಾಯಾಲಯದಿಂದ ಪೊಲೀಸರು ಅನುಮತಿ ಪಡೆದು, ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಇವರು 30ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ.</p>.<p class="Subhead">ಕ್ಯೂಆರ್ ಕೋಡ್ನಿಂದ ವಂಚನೆ: ಒಎಲ್ಎಕ್ಸ್ ಜಾಲತಾಣದಲ್ಲಿ ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಆರೋಪಿ ಗಳು, ಆನ್ಲೈನ್ ಪಾವತಿ ಮಾಡುವಂತೆ ಕ್ಯೂಆರ್ ಕೋಡ್ ಕಳಿಸುತ್ತಿದ್ದರು. ಕೋಡ್<br />ಸ್ಕ್ಯಾನ್ ಮಾಡುವಂತೆ ಹೇಳಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು.</p>.<p>'ವಾಟ್ಸ್ ಆ್ಯಪ್ ಡಿಪಿಗಳಲ್ಲಿ ಪೊಲೀಸ್ ಹಾಗೂ ಸೇನೆಯ ಅಧಿಕಾರಿಗಳ ಭಾವಚಿತ್ರ ಹಾಕಿ ಜನರನ್ನು ನಂಬಿಸುತ್ತಿದ್ದರು. ತಾವು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ, ದ್ವಿಚಕ್ರ ವಾಹನ ಹಾಗೂ ಕಾರು ಮಾರಾಟದ ಜಾಹೀರಾತು ಗಳನ್ನು ಜಾಲತಾಣಗಳಲ್ಲಿ<br />ಹಾಕುತ್ತಿದ್ದರು. ಗ್ರಾಹಕರಿಂದ ಹಂತ ಹಂತವಾಗಿ ಮುಂಗಡ ಪಾವತಿ ಮಾಡಿಸಿಕೊಂಡು, ವಾಹನ ನೀಡದೆ ವಂಚಿಸು<br />ತ್ತಿದ್ದರು. ಹಣ ಪಡೆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಒಎಲ್ಎಕ್ಸ್ ಜಾಲತಾಣದಲ್ಲಿ ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಜೈಲಿನಿಂದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>ರಾಜಸ್ಥಾನದ ಭರತ್ಪುರ ಜಿಲ್ಲೆಯ ವಾಜೀಬ್ ಖಾನ್ (30), ಸಾಹಿಲ್ (20), ಶಾಹೀದ್ (28) ಹಾಗೂ ಉಮೇರ್ ಖಾನ್ (31) ಬಂಧಿತರು.</p>.<p>ಆರೋಪಿಗಳ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವೊಂದರಲ್ಲಿ ಆಂಧ್ರಪ್ರದೇಶ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹೈದರಾಬಾದ್ನ ಕೇಂದ್ರ ಕಾರಾಗೃಹದಲ್ಲಿಇಟ್ಟಿದ್ದರು.</p>.<p>ಬೆಂಗಳೂರಿನಲ್ಲಿ ನಡೆದಿದ್ದ ಸೈಬರ್ ವಂಚನೆ ಪ್ರಕರಣಗಳಲ್ಲೂ ಆರೋಪಿಗಳು ಭಾಗಿಯಾಗಿ<br />ದ್ದರಿಂದ ನ್ಯಾಯಾಲಯದಿಂದ ಪೊಲೀಸರು ಅನುಮತಿ ಪಡೆದು, ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಇವರು 30ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ.</p>.<p class="Subhead">ಕ್ಯೂಆರ್ ಕೋಡ್ನಿಂದ ವಂಚನೆ: ಒಎಲ್ಎಕ್ಸ್ ಜಾಲತಾಣದಲ್ಲಿ ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಆರೋಪಿ ಗಳು, ಆನ್ಲೈನ್ ಪಾವತಿ ಮಾಡುವಂತೆ ಕ್ಯೂಆರ್ ಕೋಡ್ ಕಳಿಸುತ್ತಿದ್ದರು. ಕೋಡ್<br />ಸ್ಕ್ಯಾನ್ ಮಾಡುವಂತೆ ಹೇಳಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು.</p>.<p>'ವಾಟ್ಸ್ ಆ್ಯಪ್ ಡಿಪಿಗಳಲ್ಲಿ ಪೊಲೀಸ್ ಹಾಗೂ ಸೇನೆಯ ಅಧಿಕಾರಿಗಳ ಭಾವಚಿತ್ರ ಹಾಕಿ ಜನರನ್ನು ನಂಬಿಸುತ್ತಿದ್ದರು. ತಾವು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ, ದ್ವಿಚಕ್ರ ವಾಹನ ಹಾಗೂ ಕಾರು ಮಾರಾಟದ ಜಾಹೀರಾತು ಗಳನ್ನು ಜಾಲತಾಣಗಳಲ್ಲಿ<br />ಹಾಕುತ್ತಿದ್ದರು. ಗ್ರಾಹಕರಿಂದ ಹಂತ ಹಂತವಾಗಿ ಮುಂಗಡ ಪಾವತಿ ಮಾಡಿಸಿಕೊಂಡು, ವಾಹನ ನೀಡದೆ ವಂಚಿಸು<br />ತ್ತಿದ್ದರು. ಹಣ ಪಡೆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>