‘ಬಾಲಮುರುಗನ್, ತೆರಿಗೆ ಪಾವತಿಸಲೆಂದು ಇತ್ತೀಚೆಗೆ ತೆರಿಗೆ ಇಲಾಖೆಗೆ ಹೋಗಿದ್ದರು. ‘ನಿಮ್ಮ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಇದೆ’ ಎಂದು ಅಧಿಕಾರಿಗಳು ಹೇಳಿದ್ದರು. ‘ನಾನು ₹1 ಕೋಟಿ ತೆರಿಗೆ ಮಾತ್ರ ಪಾವತಿಸಬೇಕು’ ಎಂದು ಉತ್ತರಿಸಿದ್ದರು. ಅವಾಗಲೇ ಅಧಿಕಾರಿಗಳು, ‘ಗ್ಲೋಬಲ್ ಎಂಟರ್ಪ್ರೈಸಸ್ ಕಂಪನಿ ಮೂಲಕ ವಹಿವಾಟು ನಡೆಸಿದ್ದೀರಾ’ ಎಂದಿದ್ದರು. ‘ಆ ಕಂಪನಿ ಬಂದ್ ಮಾಡಿ ಐದು ವರ್ಷಗಳಾಗಿವೆ. ಯಾರೋ ನನ್ನ ಹೆಸರಿನಲ್ಲಿ ವಹಿವಾಟು ನಡೆಸಿ ವಂಚಿಸಿದ್ದಾರೆ’ ಎಂದು ಅಧಿಕಾರಿಗಳಿಗೆ ಹೇಳಿದ್ದ ಬಾಲಮುರುಗನ್, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದರು.