‘2021ರ ಡಿ. 25ರಂದು ವಿಚಾರ ಣಾಧೀನ ಕೈದಿಗಳಾದ ಕರಿಯಪ್ಪ ಹಾಗೂ ಅಭಿಷೇಕ್ ಎಂಬುವರ ಹೆಸರಿಗೆ ಪಾರ್ಸೆಲ್ ಬಂದಿತ್ತು. ಅಂಚೆ ಸಿಬ್ಬಂದಿಯೊಬ್ಬರು ಕಾರಾಗೃಹದ ಮುಖ್ಯ ದ್ವಾರದ ಬಳಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅವುಗಳನ್ನು ತಲುಪಿಸಿ ಹೋಗಿದ್ದರು. ಅನುಮಾನ ಮೂಡಿದ್ದರಿಂದ ಅವುಗಳನ್ನು ತೆರೆದು ನೋಡಲಾಗಿತ್ತು. ಕರಿಯಪ್ಪ ಹೆಸರಿಗೆ ಬಂದಿದ್ದ ಪಾರ್ಸೆಲ್ನಲ್ಲಿ 10 ಗ್ರಾಂ ಹಾಗೂ ಅಭಿಷೇಕ್ ಹೆಸರಿಗೆ ಬಂದಿದ್ದ ಪಾರ್ಸೆಲ್ನಲ್ಲಿ 150 ಗ್ರಾಂ ಗಾಂಜಾಪತ್ತೆಯಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.