ಇದು ದೇಸಿ ಸಂಸ್ಥೆಯಾಗಿದ್ದು, ಸ್ವಾವಲಂಬಿ (ಆತ್ಮನಿರ್ಭರ್) ಭಾರತ ನಿರ್ಮಾಣದಲ್ಲಿ ತನ್ನದೇ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕೆ ಹಿಂದಿನ ರಕ್ಷಣಾ ಸಚಿವರು ಈ ಸಂಸ್ಥೆಗೆ ಭೂಮಿ ನೀಡುವಂತೆ ಸೂಚನೆ ನೀಡಿದ್ದರು. ಯಾವುದೇ ಸೂಚನೆಗಳಿಗೂ ಮನ್ನಣೆ ನೀಡದೆ ಅಧಿಕಾರಿಗಳು ಭೂಮಿ ಮಂಜೂರು ಮಾಡದೆ ಮೂರು ವರ್ಷಗಳಿಂದ ಅಲೆದಾಡಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.