ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಧುಗಳಿಗೆ ವಿಶೇಷ ವಿನ್ಯಾಸದ ಆಭರಣಗಳನ್ನು ಉಚಿತವಾಗಿ ನೀಡಲು ಮಲಬಾರ್ ಚಿನ್ನ ಮತ್ತು ವಜ್ರಾಭರಣ ಕಂಪನಿ ಮುಂದಾಗಿದೆ.
ಕೇರಳದಲ್ಲಿ ಮೊದಲು ಈ ಯೋಜನೆ ಅನುಷ್ಠಾನಗೊಳಿಸಿದ್ದು, 30ಕ್ಕೂ ಹೆಚ್ಚು ವಧುಗಳಿಗೆ 600 ಗ್ರಾಂಗಳಿಗೂ ಅಧಿಕ ತೂಕದ ಒಡವೆಗಳನ್ನು ವಿತರಿಸಲಾಗಿದೆ. ಗರಿಷ್ಠ 24 ಗ್ರಾಂನ ಚಿನ್ನಾಭರಣಗಳನ್ನು ವಧುವಿಗೆ ನೀಡಲಾಗುತ್ತದೆ. ದೇಶದಾದ್ಯಂತ ಶೀಘ್ರವೇ ಈ ಯೋಜನೆ ವಿಸ್ತರಿಸಲು ಕಂಪನಿ ಯೋಚಿಸಿದೆ.
ಈ ಸೌಲಭ್ಯ ಪಡೆಯುವ ಕುಟುಂಬದ ವಧುಗಳು ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು, ಸಹೋದರರು ಇರಬಾರದು. ವಧುವಿಗೆ 20 ವರ್ಷಗಳಾಗಿರಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ. ಕಂಪನಿ ರಚಿಸುವ ಸಮಿತಿ ನೀಡುವ ವರದಿ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.