ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಚುನಾವಣೆಯಲ್ಲಿ ಸೋತ ಶಾಸಕರು ಸಚಿವರಾಗಬಾರದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ.ನೀವು ಅಪವಿತ್ರರಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪವಿತ್ರರಾಗಿ ಎಂದು ಸೂಚಿಸಿತು. ಅದರಂತೆ ನಡೆದ ಉಪಚುನಾವಣೆಯಲ್ಲಿ 12 ಮಂದಿ ಗೆಲುವು ಸಾಧಿಸಿ, ಇಬ್ಬರು ಸೋತಿದ್ದೇವೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಬರುವುದಿಲ್ಲ. ಸಚಿವ ಸ್ಥಾನಕ್ಕೆ ಎಲ್ಲರೂ ಅರ್ಹರು’ ಎಂದು ತಿಳಿಸಿದರು.