‘ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಠಾಣೆಗೆ ಅನಿಲ್ ಬಂದಿದ್ದರು. ಅವರನ್ನು ಪಿಎಸ್ಐ ಮಾತನಾಡಿಸಿದ್ದರು. ‘ನನ್ನ ವಿರುದ್ಧ ಪದೇ ಪದೇ ಸುಳ್ಳು ದೂರು ನೀಡಲಾಗುತ್ತಿದೆ. ಜೀವನವೇ ಸಾಕಾಗಿದ್ದು, ಸಾಯುವುದಕ್ಕಾಗಿ ವಿಷ ಕುಡಿದು ಬಂದಿದ್ದೇನೆ’ ಎಂದು ಅನಿಲ್ ಹೇಳಿದ್ದರು. ಎಚ್ಚೆತ್ತ ಪಿಎಸ್ಐ ಹಾಗೂ ಸಿಬ್ಬಂದಿ, ಅನಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.