<p><strong>ಬೆಂಗಳೂರು: ‘</strong>ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಸರ್ಕಾರ ಈಗಾಗಲೇ ₹1,500 ಕೋಟಿ ಹಣ ಬಿಡುಗಡೆ ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.</p>.<p>ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ವಾಣಿಜ್ಯ ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆಗೆ 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಬಳಿಕ ನನ್ನ ಸರ್ಕಾರ ಬಿದ್ದುಹೋಯಿತು. ನಂತರ, ಬಹುಮತದ ಎರಡು ಸರ್ಕಾರಗಳು ಬಂದರೂ ಈ ಯೋಜನೆ ಪ್ರಾರಂಭವಾಗಲಿಲ್ಲ. 10 ವರ್ಷಗಳ ನಂತರ ಈ ಯೋಜನೆಯನ್ನು ಚುರುಕುಗೊಳಿಸಲಾಗಿದೆ’ ಎಂದು ವಿವರಿಸಿದರು.</p>.<p>‘ಅಂದು ಈ ಯೋಜನೆಯ ಅಂದಾಜು ವೆಚ್ಚ ₹3,800 ಕೋಟಿ ಆಗಿತ್ತು. ಈಗ ₹17 ಸಾವಿರ ಕೋಟಿ ಆಗಿದೆ. ಭೂಸ್ವಾಧೀನ ಪ್ರಕ್ರಿಯೆಗೇ ₹4,500 ಕೋಟಿ ಬೇಕಾಗುತ್ತದೆ’ ಎಂದರು.</p>.<p>‘ಪಿಆರ್ಆರ್ಗೆ ಸಂಬಂಧಿಸಿದಂತೆ 2015ರಲ್ಲಿ ಹಸಿರು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅಧಿಕಾರಿಗಳು ಇದನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇಲ್ಲದಿರುತ್ತಿದ್ದರೆ ಈ ವೇಳೆಗಾಗಲೇ ಕಾಮಗಾರಿ ಪ್ರಾರಂಭವಾಗಿರುತ್ತಿತ್ತು’ ಎಂದರು.</p>.<p class="Subhead"><strong>ಕಾರಿಡಾರ್ಗೆ ವಿರೋಧ: </strong>‘ನಗರದೊಳಗೆ102 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾದಾಗಲೂ ವಿರೋಧ ವ್ಯಕ್ತವಾಗಿದೆ. ಸಂಚಾರ ದಟ್ಟಣೆ ಸಮಸ್ಯೆಗೆ ಯಾವ ರೀತಿ ಪರಿಹಾರ ಕೈಗೊಳ್ಳಬೇಕು ಎಂದು ವಿರೋಧಿಸುವವರೇ ಹೇಳಬೇಕು. ಈ ಕಾರಿಡಾರ್ ನಿರ್ಮಾಣಕ್ಕೆ ₹24 ಸಾವಿರ ಕೋಟಿ ಬೇಕಾಗುತ್ತದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಬರಬೇಕಾಗಿದೆ’ ಎಂದು ಹೇಳಿದರು.</p>.<p>ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ‘ಭವಿಷ್ಯನಿಧಿ, ವಿಮೆ ಪರಿಹಾರ ಕುರಿತ ನಿಯಮಗಳನ್ನು ಉಲ್ಲಂಘಿಸಿರುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಕಾರ್ಖಾನೆಯ ಹೊರಗೆ ಉದ್ಯೋಗಿಗೆ ಅಪಘಾತವಾದರೂ, ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದರು.</p>.<p>‘ಉದ್ದಿಮೆ ಪರವಾನಗಿ ಪಡೆಯಲು ಉದ್ಯಮಿಗಳು ಹಲವು ಬಾರಿ ಓಡಾಡಬೇಕು. ವ್ಯಾಪಾರಿಗಳಿಗೆ ಕಾಯಂ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಮನವಿ ಮಾಡಿದರು.ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ಉದ್ಯಮಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.</p>.<p><strong>ಕೈಗಾರಿಕೋದ್ಯಮಿಗಳ ಪ್ರಮುಖ ಬೇಡಿಕೆಗಳು</strong></p>.<p>* ಎಪಿಎಂಸಿ ಸೆಸ್ ಪ್ರಮಾಣವನ್ನು ಶೇ 1.5ಯಿಂದ ಶೇ 1ಕ್ಕೆ ಇಳಿಸಬೇಕು</p>.<p>* ಎಪಿಎಂಸಿಯಲ್ಲಿ ಫಾರಂ ನಂ. 35–ಬಿಯನ್ನು ರದ್ದುಪಡಿಸಬೇಕು</p>.<p>* ಕೈಗಾರಿಕೆಗೆ ಹಸ್ತಾಂತರಿಸಿದಜಮೀನಿನ ಬೆಲೆಯನ್ನು 2 ವರ್ಷಗಳಲ್ಲಿ ನಿರ್ಧರಿಸಬೇಕು</p>.<p>* ಹೊಸ ಕೈಗಾರಿಕಾ ನೀತಿ ರಚಿಸುವಾಗ ವಾಣಿಜ್ಯೋದ್ಯಮ ಸಂಸ್ಥೆಗಳ ಸದಸ್ಯರನ್ನು ಸಮಿತಿಯಲ್ಲಿ ಸೇರಿಸಬೇಕು</p>.<p>* ಜಿಲ್ಲೆಗಳಲ್ಲಿ ಆಸ್ತಿ ತೆರಿಗೆ ನಿಗದಿ ಬಗ್ಗೆ ಏಕರೂಪದ ನಿಯಮಗಳನ್ನು ಜಾರಿಗೊಳಿಸಬೇಕು</p>.<p>* ಕೈಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ನಿರ್ಧರಿಸಬೇಕು</p>.<p><strong>‘ನೆಲಮಂಗಲ– ನಿವೇಶನದ ದರ ಇಳಿಸಿ’</strong></p>.<p>‘ನೆಲಮಂಗಲ ಕೈಗಾರಿಕಾ ನಿವೇಶನದ ಬೆಲೆಯ ಕುರಿತು ಚರ್ಚೆ ನಡೆಯುತ್ತಿದೆ. ಚದರ ಅಡಿಗೆ ₹800 ದರ ನಿಗದಿ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಚದರ ಅಡಿಗೆ ₹500ರಂತೆ ಕೇಳುತ್ತಿದ್ದಾರೆ. ದರ ಮತ್ತು ಇತರೆ ಅಂಶಗಳ ಕುರಿತು ಎಫ್ಕೆಸಿಸಿಐ ಅಂತಿಮ ನಿರ್ಣಯ ತೆಗೆದುಕೊಂಡು ಬಂದರೆ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<p><strong>‘ಚೊಂಬು ಕೊಂಡೊಯ್ಯಬೇಕಿತ್ತಾ?’</strong></p>.<p>‘ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಗಳು ಟೀಕೆ ಮಾಡುತ್ತಿವೆ. ಯಾದಗಿರಿಯ ವಸತಿ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ₹1 ಕೋಟಿ ಖರ್ಚಾಗಿದೆ. ಊಟಕ್ಕೆ ₹25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸುಮ್ಮನೆ ಸುದ್ದಿ ಮಾಡಲಾಗುತ್ತಿದೆ’ ಎಂದು ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.</p>.<p>‘ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದನ್ನೂ ಟೀಕಿಸಲಾಯಿತು. ಶಾಲೆಯವರು ಶಾಶ್ವತವಾಗಿ ಅದರ ಉಪಯೋಗ ಪಡೆಯುವುದಿಲ್ಲವೇ. ಶೌಚಾಲಯ ನಿರ್ಮಿಸದೇ ನಾನೂ ಕೂಡ, ಜನರೊಂದಿಗೆ ಚೊಂಬು ತೆಗೆದುಕೊಂಡು ಹೋಗಬೇಕಿತ್ತೇ’ ಎಂದು ಅವರು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಸರ್ಕಾರ ಈಗಾಗಲೇ ₹1,500 ಕೋಟಿ ಹಣ ಬಿಡುಗಡೆ ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.</p>.<p>ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ವಾಣಿಜ್ಯ ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆಗೆ 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಬಳಿಕ ನನ್ನ ಸರ್ಕಾರ ಬಿದ್ದುಹೋಯಿತು. ನಂತರ, ಬಹುಮತದ ಎರಡು ಸರ್ಕಾರಗಳು ಬಂದರೂ ಈ ಯೋಜನೆ ಪ್ರಾರಂಭವಾಗಲಿಲ್ಲ. 10 ವರ್ಷಗಳ ನಂತರ ಈ ಯೋಜನೆಯನ್ನು ಚುರುಕುಗೊಳಿಸಲಾಗಿದೆ’ ಎಂದು ವಿವರಿಸಿದರು.</p>.<p>‘ಅಂದು ಈ ಯೋಜನೆಯ ಅಂದಾಜು ವೆಚ್ಚ ₹3,800 ಕೋಟಿ ಆಗಿತ್ತು. ಈಗ ₹17 ಸಾವಿರ ಕೋಟಿ ಆಗಿದೆ. ಭೂಸ್ವಾಧೀನ ಪ್ರಕ್ರಿಯೆಗೇ ₹4,500 ಕೋಟಿ ಬೇಕಾಗುತ್ತದೆ’ ಎಂದರು.</p>.<p>‘ಪಿಆರ್ಆರ್ಗೆ ಸಂಬಂಧಿಸಿದಂತೆ 2015ರಲ್ಲಿ ಹಸಿರು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅಧಿಕಾರಿಗಳು ಇದನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇಲ್ಲದಿರುತ್ತಿದ್ದರೆ ಈ ವೇಳೆಗಾಗಲೇ ಕಾಮಗಾರಿ ಪ್ರಾರಂಭವಾಗಿರುತ್ತಿತ್ತು’ ಎಂದರು.</p>.<p class="Subhead"><strong>ಕಾರಿಡಾರ್ಗೆ ವಿರೋಧ: </strong>‘ನಗರದೊಳಗೆ102 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾದಾಗಲೂ ವಿರೋಧ ವ್ಯಕ್ತವಾಗಿದೆ. ಸಂಚಾರ ದಟ್ಟಣೆ ಸಮಸ್ಯೆಗೆ ಯಾವ ರೀತಿ ಪರಿಹಾರ ಕೈಗೊಳ್ಳಬೇಕು ಎಂದು ವಿರೋಧಿಸುವವರೇ ಹೇಳಬೇಕು. ಈ ಕಾರಿಡಾರ್ ನಿರ್ಮಾಣಕ್ಕೆ ₹24 ಸಾವಿರ ಕೋಟಿ ಬೇಕಾಗುತ್ತದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಬರಬೇಕಾಗಿದೆ’ ಎಂದು ಹೇಳಿದರು.</p>.<p>ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ‘ಭವಿಷ್ಯನಿಧಿ, ವಿಮೆ ಪರಿಹಾರ ಕುರಿತ ನಿಯಮಗಳನ್ನು ಉಲ್ಲಂಘಿಸಿರುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಕಾರ್ಖಾನೆಯ ಹೊರಗೆ ಉದ್ಯೋಗಿಗೆ ಅಪಘಾತವಾದರೂ, ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದರು.</p>.<p>‘ಉದ್ದಿಮೆ ಪರವಾನಗಿ ಪಡೆಯಲು ಉದ್ಯಮಿಗಳು ಹಲವು ಬಾರಿ ಓಡಾಡಬೇಕು. ವ್ಯಾಪಾರಿಗಳಿಗೆ ಕಾಯಂ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಮನವಿ ಮಾಡಿದರು.ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ಉದ್ಯಮಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.</p>.<p><strong>ಕೈಗಾರಿಕೋದ್ಯಮಿಗಳ ಪ್ರಮುಖ ಬೇಡಿಕೆಗಳು</strong></p>.<p>* ಎಪಿಎಂಸಿ ಸೆಸ್ ಪ್ರಮಾಣವನ್ನು ಶೇ 1.5ಯಿಂದ ಶೇ 1ಕ್ಕೆ ಇಳಿಸಬೇಕು</p>.<p>* ಎಪಿಎಂಸಿಯಲ್ಲಿ ಫಾರಂ ನಂ. 35–ಬಿಯನ್ನು ರದ್ದುಪಡಿಸಬೇಕು</p>.<p>* ಕೈಗಾರಿಕೆಗೆ ಹಸ್ತಾಂತರಿಸಿದಜಮೀನಿನ ಬೆಲೆಯನ್ನು 2 ವರ್ಷಗಳಲ್ಲಿ ನಿರ್ಧರಿಸಬೇಕು</p>.<p>* ಹೊಸ ಕೈಗಾರಿಕಾ ನೀತಿ ರಚಿಸುವಾಗ ವಾಣಿಜ್ಯೋದ್ಯಮ ಸಂಸ್ಥೆಗಳ ಸದಸ್ಯರನ್ನು ಸಮಿತಿಯಲ್ಲಿ ಸೇರಿಸಬೇಕು</p>.<p>* ಜಿಲ್ಲೆಗಳಲ್ಲಿ ಆಸ್ತಿ ತೆರಿಗೆ ನಿಗದಿ ಬಗ್ಗೆ ಏಕರೂಪದ ನಿಯಮಗಳನ್ನು ಜಾರಿಗೊಳಿಸಬೇಕು</p>.<p>* ಕೈಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ನಿರ್ಧರಿಸಬೇಕು</p>.<p><strong>‘ನೆಲಮಂಗಲ– ನಿವೇಶನದ ದರ ಇಳಿಸಿ’</strong></p>.<p>‘ನೆಲಮಂಗಲ ಕೈಗಾರಿಕಾ ನಿವೇಶನದ ಬೆಲೆಯ ಕುರಿತು ಚರ್ಚೆ ನಡೆಯುತ್ತಿದೆ. ಚದರ ಅಡಿಗೆ ₹800 ದರ ನಿಗದಿ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಚದರ ಅಡಿಗೆ ₹500ರಂತೆ ಕೇಳುತ್ತಿದ್ದಾರೆ. ದರ ಮತ್ತು ಇತರೆ ಅಂಶಗಳ ಕುರಿತು ಎಫ್ಕೆಸಿಸಿಐ ಅಂತಿಮ ನಿರ್ಣಯ ತೆಗೆದುಕೊಂಡು ಬಂದರೆ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<p><strong>‘ಚೊಂಬು ಕೊಂಡೊಯ್ಯಬೇಕಿತ್ತಾ?’</strong></p>.<p>‘ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಗಳು ಟೀಕೆ ಮಾಡುತ್ತಿವೆ. ಯಾದಗಿರಿಯ ವಸತಿ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ₹1 ಕೋಟಿ ಖರ್ಚಾಗಿದೆ. ಊಟಕ್ಕೆ ₹25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸುಮ್ಮನೆ ಸುದ್ದಿ ಮಾಡಲಾಗುತ್ತಿದೆ’ ಎಂದು ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.</p>.<p>‘ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದನ್ನೂ ಟೀಕಿಸಲಾಯಿತು. ಶಾಲೆಯವರು ಶಾಶ್ವತವಾಗಿ ಅದರ ಉಪಯೋಗ ಪಡೆಯುವುದಿಲ್ಲವೇ. ಶೌಚಾಲಯ ನಿರ್ಮಿಸದೇ ನಾನೂ ಕೂಡ, ಜನರೊಂದಿಗೆ ಚೊಂಬು ತೆಗೆದುಕೊಂಡು ಹೋಗಬೇಕಿತ್ತೇ’ ಎಂದು ಅವರು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>