ಈ ವಿಷಯದ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಮಂಗಳೂರಿನ ಪಚ್ಚನಾಡಿ ಭೂಕುಸಿತ ಘಟನೆಯಲ್ಲಿ ಕೆಎಸ್ಪಿಸಿಬಿ ಪಾತ್ರದ ಬಗ್ಗೆ ಪ್ರಸ್ತಾಪಿಸಿ ದಂಡ ವಿಧಿಸಬಾರದೇಕೇ ಎಂದು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಮಂಡಳಿ ವಿಫಲವಾಗಿದೆ’ ಎಂದು ಹೇಳಿತು.