ವಿಶೇಷ ಮಂಡಳಿಯ ಅನುಮೋದನೆ ಪಡೆಯದೆ ದೋಷಾರೋಪ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಆರೋಪಿಸಿದ್ದ ಮೂರ್ತಿ, ಅದೇ ಆಧಾರದಲ್ಲಿ ವಿಚಾರಣೆಯನ್ನೇ ರದ್ದು ಮಾಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿ ಅಕ್ಟೋಬರ್ 4ರಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ಪೂರ್ಣಗೊಳಿಸಲು ವಿಶೇಷ ಮಂಡಳಿಗೆ ಆರು ತಿಂಗಳ ಗಡುವು ವಿಧಿಸಿದೆ.