ಲೇಖಕ ಎಸ್.ಎಸ್. ಉಮೇಶ್, ‘ಕಳೆದ ಎರಡು ವರ್ಷ ಅಯೋಧ್ಯೆಯ ಬಗ್ಗೆ ಸಂಶೋಧನೆ ನಡೆಸಿ, ಪುಸ್ತಕವನ್ನು ರಚಿಸಿದ್ದೇನೆ. ಈ ಅವಧಿಯಲ್ಲಿ ಅಯೋಧ್ಯೆಗೂ ಭೇಟಿ ನೀಡಿ, ಸಾಧು–ಸಂತರನ್ನು ಸಂದರ್ಶಿಸಿದ್ದೇನೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿ ಹಲವರು ಪೂರಕ ಮಾಹಿತಿಗಳನ್ನು ಒದಗಿಸಿದ್ದಾರೆ’ ಎಂದು ಹೇಳಿದರು.